Select Your Language

Notifications

webdunia
webdunia
webdunia
webdunia

ಕೇರಳ ಹೈಕೋರ್ಟ್ ಬಾಗಿಲು ತಟ್ಟಿದ ಕ್ರಿಕೆಟಿಗ ಶ್ರೀಶಾಂತ್

ಕೇರಳ ಹೈಕೋರ್ಟ್ ಬಾಗಿಲು ತಟ್ಟಿದ ಕ್ರಿಕೆಟಿಗ ಶ್ರೀಶಾಂತ್
Kocchi , ಶುಕ್ರವಾರ, 3 ಮಾರ್ಚ್ 2017 (09:07 IST)
ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾದರೂ, ತನ್ನ ಮೇಲೆ ಜೀವಾವಧಿ ನಿಷೇಧ ಹಿಂಪಡೆಯದ ಬಿಸಿಸಿಐಗೆ ನಿರ್ದೇಶನ ನೀಡುವಂತೆ ಕ್ರಿಕೆಟಿಗ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.


ದೆಹಲಿ ಹೈಕೋರ್ಟ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾಗಿಸಿದ್ದರೂ, ಬಿಸಿಸಿಐ ಶ್ರೀಶಾಂತ್ ಗೆ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ. ಇದರ ವಿರುದ್ಧ ಶ್ರೀಶಾಂತ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.  ಈ ಬಗ್ಗೆ ಹೈಕೋರ್ಟ್ ಗೆ ಮನವಿ ಸಲ್ಲಿಸಿರುವ ಶ್ರೀಶಾಂತ್ ದೆಹಲಿ ಕೋರ್ಟ್ ತಮ್ಮನ್ನು ಎಲ್ಲಾ ಆರೋಪಗಳಿಂದ ಮುಕ್ತಿಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ನಿರಪೇಕ್ಷಣಾ ಪತ್ರ ನೀಡುವಂತೆ ಶ್ರೀಶಾಂತ್ ಬಿಸಿಸಿಐ ಬಾಗಿಲು ತಟ್ಟಿದ್ದರು. ಆದರೆ ಕ್ರಿಕೆಟ್ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ ಸಿನಿಮಾ ಮಾಡ್ತಾರಂತೆ!