Webdunia - Bharat's app for daily news and videos

Install App

ಅಂದು ಸಚಿನ್ ಅನುಭವಿಸಿದ ಪರಿಸ್ಥಿತಿಯೇ ಈಗ ರೋಹಿತ್ ಶರ್ಮಾಗೂ ಬಂದಿದೆ!

ಕೃಷ್ಣವೇಣಿ ಕೆ
ಶುಕ್ರವಾರ, 12 ಜುಲೈ 2019 (09:20 IST)
ಲಂಡನ್: 2003 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ ಹೊಳೆಯನ್ನೇ ಹರಿಸಿದ್ದರು. ಈ ವಿಶ್ವಕಪ್ ಟೂರ್ನಿಯಲ್ಲಿ ಅಂದು ಸಚಿನ್ ಮಾಡಿದ್ದ ದಾಖಲೆಗಳನ್ನು ಮುರಿದರು. ಆದರೆ ಕೊನೆಗೆ ಇಬ್ಬರೂ ಒಂದೇ ಪರಿಸ್ಥಿತಿ ಎದುರಿಸಿದರು!


ದ.ಆಫ್ರಿಕಾದಲ್ಲಿ ನಡೆದ ಆ ಕ್ರಿಕೆಟ್ ಟೂರ್ನಿಯಲ್ಲಿ ಸಚಿನ್ ಪ್ರತೀ ಪಂದ್ಯದಲ್ಲೂ ಅದ್ಭುತವಾಗಿ ಆಡಿ ಭಾರತ ಆಸ್ಟ್ರೇಲಿಯಾ ಎದುರು ಫೈನಲ್ ವರೆಗೆ ಬಂದಿತ್ತು. ಆದರೆ ಫೈನಲ್ ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ರನ್ ಹೊಳೆಯನ್ನೇ ಚಚ್ಚಿ ಹಾಕಿತ್ತು. ಅಂದಿನ ಕಾಲಕ್ಕೆ ಆಸ್ಟ್ರೇಲಿಯಾ 350 ಗಳಿಸಿದ್ದು ಏರಲಾರದ ಬಂಡೆಯಾಗಿತ್ತು.

ಚೇಸ್ ಮಾಡಲು ಆರಂಭಿಸಿದ್ದ ಭಾರತಕ್ಕೆ ಅದುವರೆಗೆ ಅದ್ಭುತ ಫಾರ್ಮ್ ನಲ್ಲಿದ್ದ ಸಚಿನ್ ಆರಂಭದಲ್ಲಿಯೇ ನಾಲ್ಕು ರನ್ ಗಳಿಗೆ ಕ್ಯಾಚ್ ಔಟ್ ಆಗುವ ಮೂಲಕ ಆಘಾತ ಸಿಕ್ಕಿತ್ತು. ಬಳಿಕ ವೀರೇಂದ್ರ ಸೆಹ್ವಾಗ್ ಒಬ್ಬರೇ ಏಕಾಂಗಿಯಂತೆ ಕೊನೆಯವರೆಗೂ ಹೋರಾಡಿದರೂ ಭಾರತದ ಸೋಲು ತಪ್ಪಿಸಲಾಗಲಿಲ್ಲ. ಆ ಟೂರ್ನಿಯಲ್ಲಿ ಒಟ್ಟು 673 ರನ್ ಗಳಿಸಿದ ಸಚಿನ್ ವಿಶ್ವದಾಖಲೆ ಮಾಡಿದ್ದಕ್ಕೆ ಚಿನ್ನದ ಬ್ಯಾಟ್ ನ್ನು ಗೌರವ ಪೂರ್ವಕವಾಗಿ ಬಹುಮಾನ ಪಡೆದರು. ಆದರೆ ಆ ಬಹುಮಾನ ಪಡೆಯುವಾಗ ಸಚಿನ್ ಗೆ ಸಂತೋಷವಾಗಲಿಲ್ಲ. ಕಾರಣ, ಭಾರತ ಆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿತ್ತು. ಎಲ್ಲರೂ ನಿರಾಶೆಯಲ್ಲಿದ್ದರು.

ಅದೇ ಪರಿಸ್ಥಿತಿಯಲ್ಲಿ ಇಂದು ರೋಹಿತ್ ಶರ್ಮಾ ಇದ್ದಾರೆ. ಈ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋಲುವಾಗ ಹೆಚ್ಚು ದುಃಖವಾಗಿದ್ದು ರೋಹಿತ್ ಗೆ. ಯಾಕೆಂದರೆ ಅವರ ಪಾಲಿಗೆ ಇದು ಕನಸಿನ ವಿಶ್ವಕಪ್ ಆಗಿತ್ತು. ಪ್ರತೀ ಪಂದ್ಯದಲ್ಲೂ ಶತಕ, ದಾಖಲೆ ಮಾಡಿ ನಿರ್ಣಾಯಕ ಪಂದ್ಯದಲ್ಲೇ ಅವರು ತಂಡಕ್ಕೆ ಆಧಾರವಾಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರಿಗೆ ಇಷ್ಟು ದಿನ ಹರಿಸಿದ ರನ್ ಹೊಳೆಗೆ ಯಾವುದೇ ಬೆಲೆ ಇಲ್ಲ ಎನಿಸಿರಬಹುದು. ಈ ವಿಶ್ವಕಪ್ ನಲ್ಲಿ ರೋಹಿತ್ ಸಚಿನ್ ದಾಖಲೆ ಮುರಿಯುವುದರ ಜತೆಗೆ ಅವರು ಅಂದು ಅನುಭವಿಸಿದ ದುಃಖವನ್ನೂ ಅನುಭವಿಸಿದ್ದಾರೆ ಎನ್ನುವುದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಬಾತುಕೋಳಿ ತಿನ್ನೋದು ಬಿಟ್ಟ ಚೀನಿಯರು, ಭಾರತ ಕ್ರೀಡೆಗೂ ತಟ್ಟಿದ ಅದರ ಬಿಸಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೇ ಶ್ರೇಯಸ್ ಅಯ್ಯರ್ ಫ್ಯಾನ್ಸ್ ಗರಂ

ಮುಂದಿನ ಸುದ್ದಿ
Show comments