Select Your Language

Notifications

webdunia
webdunia
webdunia
webdunia

ಕೆಲ್ಸಕ್ಕೆ ಬಾರದವರು ಎಂದ ಮೈಕಲ್ ವಾನ್ ಗೆ ಜರ್ಸಿ ಕೊಟ್ಟ ರವೀಂದ್ರ ಜಡೇಜಾ

ಕೆಲ್ಸಕ್ಕೆ ಬಾರದವರು ಎಂದ ಮೈಕಲ್ ವಾನ್ ಗೆ ಜರ್ಸಿ ಕೊಟ್ಟ ರವೀಂದ್ರ ಜಡೇಜಾ
ಲಂಡನ್ , ಮಂಗಳವಾರ, 31 ಆಗಸ್ಟ್ 2021 (09:54 IST)
ಲಂಡನ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಪ್ರದರ್ಶನದ ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಭಾರತೀಯ ಕ್ರಿಕೆಟಿಗರನ್ನು ಕೆಲ್ಸಕ್ಕೆ ಬಾರದವರು ಎಂದು ಜರೆದಿದ್ದರು.


ಇದಕ್ಕೀಗ ಆಲ್ ರೌಂಡರ್ ರವೀಂದ್ರ ಜಡೇಜಾ ತಕ್ಕ ತಿರುಗೇಟು ಕೊಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಸಹಿಯುಳ್ಳ ಜೆರ್ಸಿಯೊಂದನ್ನು ಮೈಕಲ್ ವಾನ್ ಗೆ ಕಳುಹಿಸಿಕೊಟ್ಟಿದ್ದಾರೆ.

ಇದನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಚ್ಯಾರಿಟಿಗೆ ನೀಡಲು ಜೆರ್ಸಿ ಕೊಟ್ಟಿದ್ದಾರೆ. ಇದಕ್ಕೆ ವಾನ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟಿಗರ ಸಹಿಯಿರುವ ಜೆರ್ಸಿಗೆ ಡಿಮ್ಯಾಂಡ್ ಜಾಸ್ತಿ. ಈ ಮೂಲಕ ತಮ್ಮ ಆಟಗಾರರ ಬೆಲೆ ಏನೆಂದು ವಾನ್ ಗೆ ತಿಳಿಸಿಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಲಿಬಾನಿಗರನ್ನು ಹೊಗಳಿದ ಪಾಕ್ ಕ್ರಿಕೆಟಿಗ ಅಫ್ರಿದಿ