Webdunia - Bharat's app for daily news and videos

Install App

ಅಚ್ಚೇ ದಿನ್ ಬರಲಿವೆ ಎಂದ ರವಿಚಂದ್ರನ್ ಅಶ್ವಿನ್! ಯಾರಿಗೆಂದು ಅವರೇ ಹೇಳಿದ್ದಾರೆ ನೋಡಿ

Webdunia
ಶನಿವಾರ, 7 ಜನವರಿ 2017 (09:23 IST)
ಚೆನ್ನೈ: ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ ಎಂದು ಟೀಂ ಇಂಡಿಯಾದ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಅವರು ಹೇಳಿದ್ದು ಯಾವ ಅರ್ಥದಲ್ಲಿ? ವಿರಾಟ್ ಕೊಹ್ಲಿ ನಾಯಕನಾಗಿದ್ದಕ್ಕೇ? ಇಲ್ಲಾ, ಬಿಸಿಸಿಐನಲ್ಲಿ ಬದಲಾವಣೆಯಾಗುತ್ತಿರುವುದಕ್ಕಾ?

ಇದ್ಯಾವುದಕ್ಕೂ ಅಲ್ಲ. ಅಷ್ಟಕ್ಕೂ ಅಚ್ಚೇ ದಿನ್ ಬಂದಿದ್ದು ಅವರ ವೈಯಕ್ತಿಕ ಜೀವನದಲ್ಲಿ. ವಿಶ್ವ ನಂ.1 ಬೌಲರ್, ಆಲ್ ರೌಂಡರ್, ವರ್ಷದ ಕ್ರಿಕೆಟಿಗ ಎಲ್ಲವೂ ಬಂತು. ಇತ್ತೀಚೆಗಷ್ಟೇ ಎರಡನೇ ಮಗಳೂ ಹುಟ್ಟದಳು. ಅದಕ್ಕೆ ಹಾಗೆ ಹೇಳಿದರಾ? ಖಂಡಿತಾ ಇಲ್ಲ. ಇಷ್ಟೆಲ್ಲಾ ಖ್ಯಾತಿ ಬಂದಿದ್ದಕ್ಕೆ ಅವರ ಹಿಂದೆ 15 ಕಂಪನಿಗಳು ರಾಯಭಾರಿಯಾಗಲು ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳಲು ಸಾಲಾಗಿ ನಿಂತಿವೆ.

ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಈ ವರ್ಷ ನಿಮ್ಮ ವೃತ್ತಿ ಜೀವನದ ಅತ್ಯುತ್ತಮ ವರ್ಷವೇ ಎಂದು ಕೇಳಿದ್ದಕ್ಕೆ, “ಇದುವೇ ನನ್ನ ಬೆಸ್ಟ್ ಅಲ್ಲ. ಇದಕ್ಕಿಂತ ಒಳ್ಳೆಯ ದಿನಗಳು ನನ್ನ ಜೀವನದಲ್ಲಿ ಬರಲಿವೆ” ಎಂದರು. ಅಂದ ಹಾಗೆ ಅಶ್ವಿನ್ ಈಗ ಕಂಪನಿಗಳ ಮೆಚ್ಚಿನ ತಾರೆಯಾಗಿದ್ದು, ತಾ ಮುಂದು ತಾ ಮುಂದು ಎಲ್ಲರೂ ಅವರನ್ನು ರಾಯಭಾರಿಯಾಗಿ ಮಾಡಿಕೊಳ್ಳಲು ಕ್ಯೂ ನಿಂತಿವೆ. ನಮ್ಮ ದೇಶದ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅತೀ ಹೆಚ್ಚು ಸಂಸ್ಥೆಗಳಿಗೆ ಪ್ರಚಾರ ರಾಯಭಾರಿಗಳಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments