ಮತ್ತೆ ಎಡವಟ್ಟು ಮಾಡಿಕೊಂಡ ರವಿಚಂದ್ರನ್ ಅಶ್ವಿನ್

Webdunia
ಶುಕ್ರವಾರ, 29 ಮಾರ್ಚ್ 2019 (08:22 IST)
ಕೋಲ್ಕೊತ್ತಾ: ಯಾಕೋ ಈ ಬಾರಿಯ ಐಪಿಎಲ್ ನಲ್ಲಿ ಉದ್ದೇಶಪೂರ್ವಕವಾಗಿಯೋ, ಅಲ್ಲದೆಯೋ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಒಂದಲ್ಲಾ ಒಂದು ವಿವಾದಕ್ಕೀಡಾಗುತ್ತಿದ್ದಾರೆ.


ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ಅಶ್ವಿನ್ ಕೋಲ್ಕೊತ್ತಾ ನೈಟ್ ರೈಡರ್ಸ್‍ ತಂಡದ ವಿರುದ್ಧದ ಆಟದಲ್ಲೂ ಎಡವಟ್ಟು ಮಾಡಿಕೊಂಡು ದುಬಾರಿ ಬೆಲೆ ತೆತ್ತಿದ್ದಾರೆ.

ಕೆಕೆಆರ್ ಇನಿಂಗ್ಸ್ ನ 17 ನೇ ಓವರ್ ನಲ್ಲಿ ಆಂಡ್ರ್ಯೂ ರಸೆಲ್ 3 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಕೆಕೆಆರ್ ಅಭಿಮಾನಿಗಳು ರಸೆಲ್ ಬೌಲ್ಡ್ ಆಗುತ್ತಿದ್ದಂತೇ ಮೌನಕ್ಕೆ ಶರಣಾಗಿತ್ತು.

ಆದರೆ ಅಂಪಾಯರ್ ಆ ಬಾಲ್ ನ್ನು ನೋ ಬಾಲ್ ಎಂದು ಘೋಷಿಸಿದರು. ಯಾಕೆಂದರೆ ನಿಯಮದ ಪ್ರಕಾರ 30 ಯಾರ್ಡ್ ಸರ್ಕಲ್ ಒಳಗೆ ಆಗ ನಾಲ್ವರು ಫೀಲ್ಡರ್ ಗಳಿರಬೇಕಿತ್ತು. ಆದರೆ ಪಂಜಾಬ್ ನಾಯಕನ ಅವಾಂತರದಿಂದ ಮೂವರು ಫೀಲ್ಡರ್ ಗಳು ಮಾತ್ರ ಅಲ್ಲಿದ್ದರು. ಹೀಗಾಗಿ ಅಂಪಾಯರ್ ಅದನ್ನು ನೋ ಬಾಲ್ ಎಂದು ಘೋಷಿಸಿದರು.

ನಂತರ ನಡೆದಿದ್ದೇ ಬೇರೆ ಕತೆ. ರಸೆಲ್ ಇದರ ಲಾಭವೆತ್ತಿ ಮುಂದಿನ 11 ಬಾಲ್ ಗಳಲ್ಲಿ ಐದು ಸಿಕ್ಸರ್, ಮೂವರು ಬೌಂಡರಿ ಚಚ್ಚಿ ತಂಡದ ಸ್ಕೋರ್ 200 ಗಡಿ ದಾಟಿಸಿದರು. ಪಂದ್ಯದ ಬಳಿಕ ಅಶ್ವಿನ್ ಈ ತಪ್ಪಿನ ಜವಾಬ್ಧಾರಿ ತಾವೇ ಹೊತ್ತುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಮುಂದಿನ ಸುದ್ದಿ
Show comments