ವಿಶಾಖಪಟ್ಟಣಂ: ಕೋಚ್ ಆಯ್ಕೆ ವಿಚಾರದಲ್ಲಿ ರವಿಶಾಸ್ತ್ರಿ ಮತ್ತು ಸೌರವ್ ಗಂಗೂಲಿ ನಡುವೆ ಸಂಬಂಧ ಹಳಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆ ಸಂದರ್ಭದಲ್ಲಿ ಅವರಿಬ್ಬರೂ ಪರಸ್ಪರ ಕೆಸರೆರಚಾಟ ಮಾಡಿಕೊಂಡಿದ್ದರು. ಇದೀಗ ಮತ್ತೆ ರವಿ ಶಾಸ್ತ್ರಿ ಗಂಗೂಲಿಯನ್ನು ಕೆಣಕಿದ್ದಾರೆ.
ದ್ವಿತೀಯ ಟೆಸ್ಟ್ ಪಂದ್ಯದ ಕಾಮೆಂಟರಿ ಮಾಡುತ್ತಿರುವಾಗ ರವಿಶಾಸ್ತ್ರಿ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಗುಣಗಾನ ಮಾಡುತ್ತಿದ್ದರು. ಇವರಿಬ್ಬರನ್ನೂ ವಿದರ್ಭ ಎಕ್ಸ್ ಪ್ರೆಸ್ ಮತ್ತು ಸುಲ್ತಾನ್ ಆಫ್ ಬೆಂಗಾಲ್ ಎಂದು ಹೊಗಳಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಇಂಗ್ಲೆಂಡ್ ಕಾಮೆಂಟೇಟರ್ ಇಯಾನ್ ಬಾಥಮ್ ಗಂಗೂಲಿಯನ್ನು ಉದ್ದೇಶಿಸಿ, ಬೆಂಗಾಲದ ರಾಜಕುಮಾರ ಎಂದು ಕರೆಸಿಕೊಂಡವರು ಈಗಾಗಲೇ ಇದ್ದಾರೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರವಿಶಾಸ್ತ್ರಿ, ಬೆಂಗಲಾಕ್ಕೆ ಒಬ್ಬನೇ ರಾಜಕುಮಾರನಲ್ಲ ಎಂದು ಪರೋಕ್ಷವಾಗಿ ಗಂಗೂಲಿಗೆ ಕುಟುಕಿದರು. ಈ ಬಗ್ಗೆ ಗಂಗೂಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ರವಿ ಶಾಸ್ತ್ರಿ ಹೇಳಿಕೆ ಗಂಗೂಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ