Webdunia - Bharat's app for daily news and videos

Install App

ಶಾಕ್ ಆಗಿ ಕೂತಿದ್ದ ಧೋನಿ, ಇರ್ಫಾನ್ ಪಠಾಣ್ ಗೆ ಸಿನಿಮಾ ತೋರಿಸಿದ್ದ ರಾಹುಲ್ ದ್ರಾವಿಡ್

Webdunia
ಸೋಮವಾರ, 1 ಜೂನ್ 2020 (09:29 IST)
ಮುಂಬೈ: 2007 ರ ಏಕದಿನ ವಿಶ್ವಕಪ್ ಟೀಂ ಇಂಡಿಯಾಕ್ಕೆ ಈಗಲೂ ದುಸ್ವಪ್ನವೇ. ಅಂದು ಬಾಂಗ್ಲಾ ವಿರುದ್ಧ ಸೋತು ಆಘಾತಕಾರಿಯಾಗಿ ಟೂರ್ನಿಯಿಂದ ಹೊರನಡೆದಿದ್ದ ಘಟನೆಯನ್ನು ಇಂದಿಗೂ ಆಟಗಾರರು ಕರಾಳ ನೆನಪಾಗಿ ನೆನೆಸಿಕೊಳ್ಳುತ್ತಾರೆ.


ಆವತ್ತು ಸೋತ ಬಳಿಕ ಆಟಗಾರರ ಆತ್ಮವಿಶ್ವಾಸ ಪಾತಾಳ ಸೇರಿತ್ತು. ಆವತ್ತು ದ್ರಾವಿಡ್ ಹೇಗೆ ತಮ್ಮನ್ನು ಚಿಯರ್ ಅಪ್ ಮಾಡಿದರು ಎಂಬ ವಿಚಾರವನ್ನು ಇರ್ಫಾನ್ ಪಠಾಣ್ ಸ್ಮರಿಸಿಕೊಂಡಿದ್ದಾರೆ.

‘ಎಲ್ಲರೂ ಗಂಗೂಲಿ, ಅನಿಲ್ ಕುಂಬ್ಳೆ, ಧೋನಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನ ಪ್ರಕಾರ ದ್ರಾವಿಡ್ ಶ್ರೇಷ್ಠ ನಾಯಕರಾಗಿದ್ದರು. ಯಾರೂ ಅವರ ನಾಯಕತ್ವದ ಬಗ್ಗೆ ಹೊಗಳಿ ಮಾತಾಡಲ್ಲ. ಆದರೆ ಅವರ ಕಾಲದಲ್ಲಿ ಆಟಗಾರರ ನಡುವೆ ಸಂವಹನ ಚೆನ್ನಾಗಿತ್ತು. ಎಷ್ಟೋ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದೆವು. ಆದರೆ 2007 ರ ವಿಶ್ವಕಪ್ ಸೋಲು ನಮ್ಮನ್ನು ಕಂಗೆಡಿಸಿತ್ತು. ನಾವೆಲ್ಲಾ ರೂಂನಲ್ಲಿ ಎಲ್ಲವನ್ನೂ ಕಳೆದುಕೊಂಡವರಂತೆ ಕೂತಿದ್ದೆವು. ಆಗ ದ್ರಾವಿಡ್ ನಮ್ಮನ್ನು ‘300’ ಸಿನಿಮಾ ನೋಡಲು ಕರೆದೊಯ್ದರು. ಬಳಿಕ ನನಗೆ ಮತ್ತು ಧೋನಿಗೆ ಇದುವೇ ಜಗತ್ತಿನ ಕೊನೆಯಲ್ಲ. ನೀವಿಬ್ಬರೂ ಸಾಕಷ್ಟು ಕ್ರಿಕೆಟ್ ಆಡಿದ್ದೀರಿ. ಮುಂದೆಯೂ ಆಡಲಿದ್ದೀರಿ. ಇದೊಂದು ಕೆಟ್ಟ ದಿನವಾಗಿತ್ತಷ್ಟೇ. ಮುಂದೆ ನೀವಿಬ್ಬರೂ ತುಂಬಾ ಪಂದ್ಯಗಳನ್ನು ಆಡಿ ಭಾರತಕ್ಕಾಗಿ ಗೆಲುವು ತಂದುಕೊಡಲಿದ್ದೀರಿ ಎಂದು ನಮ್ಮಲ್ಲಿ ಜೀವ ತುಂಬಿದ್ದರು’ ಎಂದು ಪಠಾಣ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments