Webdunia - Bharat's app for daily news and videos

Install App

ಶಾಕ್ ಆಗಿ ಕೂತಿದ್ದ ಧೋನಿ, ಇರ್ಫಾನ್ ಪಠಾಣ್ ಗೆ ಸಿನಿಮಾ ತೋರಿಸಿದ್ದ ರಾಹುಲ್ ದ್ರಾವಿಡ್

Webdunia
ಸೋಮವಾರ, 1 ಜೂನ್ 2020 (09:29 IST)
ಮುಂಬೈ: 2007 ರ ಏಕದಿನ ವಿಶ್ವಕಪ್ ಟೀಂ ಇಂಡಿಯಾಕ್ಕೆ ಈಗಲೂ ದುಸ್ವಪ್ನವೇ. ಅಂದು ಬಾಂಗ್ಲಾ ವಿರುದ್ಧ ಸೋತು ಆಘಾತಕಾರಿಯಾಗಿ ಟೂರ್ನಿಯಿಂದ ಹೊರನಡೆದಿದ್ದ ಘಟನೆಯನ್ನು ಇಂದಿಗೂ ಆಟಗಾರರು ಕರಾಳ ನೆನಪಾಗಿ ನೆನೆಸಿಕೊಳ್ಳುತ್ತಾರೆ.


ಆವತ್ತು ಸೋತ ಬಳಿಕ ಆಟಗಾರರ ಆತ್ಮವಿಶ್ವಾಸ ಪಾತಾಳ ಸೇರಿತ್ತು. ಆವತ್ತು ದ್ರಾವಿಡ್ ಹೇಗೆ ತಮ್ಮನ್ನು ಚಿಯರ್ ಅಪ್ ಮಾಡಿದರು ಎಂಬ ವಿಚಾರವನ್ನು ಇರ್ಫಾನ್ ಪಠಾಣ್ ಸ್ಮರಿಸಿಕೊಂಡಿದ್ದಾರೆ.

‘ಎಲ್ಲರೂ ಗಂಗೂಲಿ, ಅನಿಲ್ ಕುಂಬ್ಳೆ, ಧೋನಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನ ಪ್ರಕಾರ ದ್ರಾವಿಡ್ ಶ್ರೇಷ್ಠ ನಾಯಕರಾಗಿದ್ದರು. ಯಾರೂ ಅವರ ನಾಯಕತ್ವದ ಬಗ್ಗೆ ಹೊಗಳಿ ಮಾತಾಡಲ್ಲ. ಆದರೆ ಅವರ ಕಾಲದಲ್ಲಿ ಆಟಗಾರರ ನಡುವೆ ಸಂವಹನ ಚೆನ್ನಾಗಿತ್ತು. ಎಷ್ಟೋ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದೆವು. ಆದರೆ 2007 ರ ವಿಶ್ವಕಪ್ ಸೋಲು ನಮ್ಮನ್ನು ಕಂಗೆಡಿಸಿತ್ತು. ನಾವೆಲ್ಲಾ ರೂಂನಲ್ಲಿ ಎಲ್ಲವನ್ನೂ ಕಳೆದುಕೊಂಡವರಂತೆ ಕೂತಿದ್ದೆವು. ಆಗ ದ್ರಾವಿಡ್ ನಮ್ಮನ್ನು ‘300’ ಸಿನಿಮಾ ನೋಡಲು ಕರೆದೊಯ್ದರು. ಬಳಿಕ ನನಗೆ ಮತ್ತು ಧೋನಿಗೆ ಇದುವೇ ಜಗತ್ತಿನ ಕೊನೆಯಲ್ಲ. ನೀವಿಬ್ಬರೂ ಸಾಕಷ್ಟು ಕ್ರಿಕೆಟ್ ಆಡಿದ್ದೀರಿ. ಮುಂದೆಯೂ ಆಡಲಿದ್ದೀರಿ. ಇದೊಂದು ಕೆಟ್ಟ ದಿನವಾಗಿತ್ತಷ್ಟೇ. ಮುಂದೆ ನೀವಿಬ್ಬರೂ ತುಂಬಾ ಪಂದ್ಯಗಳನ್ನು ಆಡಿ ಭಾರತಕ್ಕಾಗಿ ಗೆಲುವು ತಂದುಕೊಡಲಿದ್ದೀರಿ ಎಂದು ನಮ್ಮಲ್ಲಿ ಜೀವ ತುಂಬಿದ್ದರು’ ಎಂದು ಪಠಾಣ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments