Webdunia - Bharat's app for daily news and videos

Install App

ಅಖ್ತರ್ ಭವಿಷ್ಯ ನುಡಿದಂತೆ ಪ್ರಧಾನಿ ಮೋದಿ ಧೋನಿಗೆ ಪತ್ರ ಬರೆದೇ ಬಿಟ್ರು! ಆದ್ರೆ ಹೇಳಿದ್ದೇನು?

Webdunia
ಶುಕ್ರವಾರ, 21 ಆಗಸ್ಟ್ 2020 (09:05 IST)
ನವದೆಹಲಿ: ಧೋನಿ 2021 ರ ಟಿ20 ವಿಶ್ವಕಪ್ ಆಡುವಂತೆ ಪ್ರಧಾನಿ ಮೋದಿ ಮನವಿ ಮಾಡಬಹುದು ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದರು. ಅಖ್ತರ್ ಭವಿಷ್ಯ ನುಡಿದಂತೆ ಪ್ರಧಾನಿ ಮೋದಿ ಧೋನಿಗೆ ಪತ್ರ ಬರೆದಿದ್ದಾರೆ. ಆದರೆ ಆ ಪತ್ರದಲ್ಲಿ ಹೇಳಿದ್ದೇನು ಗೊತ್ತಾ? ಪತ್ರದ ಸಾರಾಂಶ ಇಲ್ಲಿದೆ.


ಪ್ರೀತಿಯ ಮಹೇಂದ್ರ,
ಆಗಸ್ಟ್ 15 ರಂದು ನಿನ್ನ ಎಂದಿನ ಶೈಲಿಯಲ್ಲಿ ಸಣ್ಣ ವಿಡಿಯೋ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವೆ. ಈ ವಿಚಾರ ಇಡೀ ದೇಶದಲ್ಲೇ ಚರ್ಚೆಗೆ ಕಾರಣವಾಯಿತು. ದೇಶದ 130 ಕೋಟಿ ಜನ ನಿಮ್ಮ ನಿರ್ಧಾರದಿಂದ ಬೇಸರಗೊಂಡರು ಆದರೆ ದಶಕಗಳ ಕಾಲ ನೀವು ಭಾರತೀಯ ಕ್ರಿಕೆಟ್ ಗೆ ನೀಡಿದ ಕೊಡುಗೆಗೆ ಧನ್ಯವಾದ ಅರ್ಪಿಸಿದರು.

ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕ ನೀವು. ನಿಮ್ಮ ದಾಖಲೆಗಳು, ಸಾಧನೆಗಳು ಚರಿತ್ರಾರ್ಹವಾಗಲಿದೆ. ಕಷ್ಟದ ಸಮಯದಲ್ಲೂ ನೀವು ನಿಭಾಯಿಸುವ ರೀತಿ, ಪಂದ್ಯವನ್ನು ಮುಗಿಸುವ ರೀತಿ ಸ್ಮರಣೀಯ. ಆದರೆ ಮಹೇಂದ್ರ ಸಿಂಗ್ ಧೋನಿ ಎಂದರೆ ಕೇವಲ ಕ್ರಿಕೆಟಿಗನಾಗಿ ಮಾತ್ರ ನೆನಪಿನಲ್ಲುಳಿಯುವವರಲ್ಲ.

ಒಂದು ಸಣ್ಣ ಹಳ್ಳಿಯಿಂದ ಬಂದು ವಿಶ್ವವೇ ಮೆಚ್ಚುವ ಸಾಧನೆ ಸಾಮಾನ್ಯ ಮಾತಲ್ಲ. ನಿಮ್ಮ ಸಾಧನೆ ಕೋಟ್ಯಂತರ ಯುವಕರಿಗೆ ಸ್ಪೂರ್ತಿ. ಇಂದಿನ ಯುವಕರು ರಿಸ್ಕ್ ತೆಗೆದುಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅದನ್ನು ನೀವು 2007 ರ ವಿಶ್ವಕಪ್ ನಲ್ಲೇ ಮಾಡಿ ತೋರಿಸಿದ್ದೀರಿ.

ನಿಮ್ಮ ಕೇಶ ಶೈಲಿ ಬದಲಾದರೂ ನೀವು ಮಾತ್ರ ಸದಾ ಕೂಲ್ ಆಗಿಯೇ ಉಳಿದಿರಿ. ಭಾರತೀಯ ಸೇನೆಯ ಜತೆಗೆ ನಿಮ್ಮ ನಂಟಿನ ಬಗೆಯೂ ನಾನು ಉಲ್ಲೇಖಿಸಲು ಬಯಸುತ್ತೇನೆ. ಅವರ ಬಗ್ಗೆ ನಿಮಗಿರುವ ಕಾಳಜಿ ಗಮನಾರ್ಹ.

ಮುಂದಿನ ದಿನಗಳಲ್ಲಿ ಸಾಕ್ಷಿ ಮತ್ತು ಜೀವಾ ನಿಮ್ಮ ಜತೆಗೆ ಕಳೆಯಲು ಸಾಕಷ್ಟು ಸಮಯ ಸಿಗುತ್ತದೆ. ಅವರಿಗೂ ನಾನು ಶುಭ ಹಾರೈಸುತ್ತೇನೆ. ಯಾಕೆಂದರೆ ಅವರ ತ್ಯಾಗವಿಲ್ಲದೇ, ಬೆಂಬಲವಿಲ್ಲದೇ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಮೈದಾನದಲ್ಲಿ ಎಲ್ಲರೂ ಇರುವಾಗ ನೀವು ನಿಮ್ಮ ಮಗಳ ಜತೆಗೆ ಆಡುವ ಫೋಟೋವನ್ನು ನಾನು ನೋಡಿದ್ದೆ. ಅದು ಧೋನಿ ಎಂದರೆ. ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ,

ಇಂತಿ,
ನರೇಂದ್ರ ಮೋದಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDvsSL: ಕಾದು ಕಾದು ಸಾಕಾಯ್ತು.. ಕೊನೆಗೂ ಧ್ರುವ ಜ್ಯುರೆಲ್ ಶತಕ ಸಿಡಿಸಿದಾಗ ಗಿಲ್, ಗಂಭೀರ್ ರಿಯಾಕ್ಷನ್ ಹೇಗಿತ್ತು ಗೊತ್ತಾ Video

ನನಗೆ ಆತ ಏನು ಹೇಳಿದ್ದ ಎಂದು ಗೊತ್ತಿಲ್ಲದೇ ಜಡ್ಜ್ ಮಾಡಬೇಡಿ: ಕಿತ್ತಾಡಿದ್ದಕ್ಕೆ ಯಶಸ್ವಿ ಜೈಸ್ವಾಲ್ ಖಡಕ್ ಹೇಳಿಕೆ

IND vs SL: ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೊಸ ದಾಖಲೆ

Ind vs SL 2nd TEST: ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ

ವಿಡಿಯೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಡಬಲ್ಸ್‌ ಆಟಗಾರ್ತಿಯರ ಚಾರಿತ್ರಿಕ ಸಾಧನೆ

ಮುಂದಿನ ಸುದ್ದಿ
Show comments