Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಇನ್ನೂ ಬೆಂಬಿಡದ ದುರಾದೃಷ್ಟ

ಕೆಎಲ್ ರಾಹುಲ್ ಗೆ ಇನ್ನೂ ಬೆಂಬಿಡದ ದುರಾದೃಷ್ಟ
ಕೊಲೊಂಬೋ , ಮಂಗಳವಾರ, 6 ಮಾರ್ಚ್ 2018 (08:52 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ, ಬಾಂಗ್ಲಾದೇಶದ ನಡುವೆ ತ್ರಿಕೋನ ಟಿ20 ಸರಣಿ ಇಂದಿನಿಂದ ಆರಂಭವಾಗುತ್ತಿದ್ದು, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ.

ಆದರೆ ತಂಡದಲ್ಲಿ ಇನ್ನೂ ಕನ್ನಡಿಗ ಕೆಎಲ್ ರಾಹುಲ್ ಗೆ ಸ್ಥಾನ ಸಿಗುತ್ತದೆಂಬ ಯಾವ ಖಚಿತತೆಯೂ ಇಲ್ಲ. ಟೀಂ ಇಂಡಿಯಾ ವಿರಾಟ್ ಕೊಹ್ಲಿ, ಧೋನಿ ಮುಂತಾದ ಹಿರಿಯ ಆಟಗಾರರ ಉಪಸ್ಥಿತಿಯಲ್ಲಂತೂ ರಾಹುಲ್ ಗೆ ಸ್ಥಾನ ಸಿಗುವ ಛಾನ್ಸ್ ಇರುವುದಿಲ್ಲ.

ಆದರೆ ಇವರೆಲ್ಲರ ಅನುಪಸ್ಥಿತಿಯಲ್ಲೂ ರಾಹುಲ್ ಬೆಂಚ್ ಕಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಇಬ್ಬರೂ ತಂಡದಲ್ಲಿರುವುದರಿಂದ ಆರಂಭಿಕರ ಸ್ಥಾನ ಭರ್ತಿಯಾಗಿದೆ. ಮಧ್ಯಮ ಕ್ರಮಾಂಕಕ್ಕೆ ರಾಹುಲ್ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ಈ ಪ್ರತಿಭಾವಂತ ಆಟಗಾರನಿಗೆ ಈ ಸರಣಿಯಲ್ಲೂ ಬೆಂಚ್ ಕಾಯಿಸಬೇಕಾದ ಪರಿಸ್ಥಿತಿ ಬಂದಿರುವುದು ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಕೋನ ಸರಣಿಗೆ ಲಂಕಾಗೆ ಹಾರಿದ ಟೀಂ ಇಂಡಿಯಾ