Webdunia - Bharat's app for daily news and videos

Install App

ನಾನಿನ್ನೂ ಹೊಸಬ ಅದಕ್ಕೇ ಸೀನಿಯರ್ಸ್ ಸಹಾಯ ಪಡೆಯುತ್ತೇನೆ ಎಂದ ವಿರಾಟ್ ಕೊಹ್ಲಿ!

Webdunia
ಗುರುವಾರ, 2 ಫೆಬ್ರವರಿ 2017 (09:05 IST)
ಬೆಂಗಳೂರು: ವಿರಾಟ್ ಕೊಹ್ಲಿ ಕ್ರಿಕೆಟ್ ಗೆ ಹೊಸಬರಲ್ಲ. ಆದರೆ ಕಿರು ಮಾದರಿ ಕ್ರಿಕೆಟ್ ನ ನಾಯಕತ್ವ ಹೊತ್ತುಕೊಂಡಿರುವುದು ಇದೇ ಮೊದಲು. ಮೈದಾನದಲ್ಲಿ ಅವರು ಸದಾ ಧೋನಿಯೊಂದಿಗೆ ಚರ್ಚಿಸುವುದಕ್ಕೆ ಅವರೇ ಸಮಜಾಯಿಷಿ ಕೊಟ್ಟಿದ್ದಾರೆ.

 
ಧೋನಿ ನಾಯಕತ್ವದಿಂದ ಕೆಳಗಿಳಿದ ಮೇಲೂ ತಂಡದ ಫೀಲ್ಡಿಂಗ್ ಸಂಯೋಜನೆಯ ವಿಷಯದಲ್ಲಿ ಅವರೇ ಕೊಹ್ಲಿಗಿಂತ ಹೆಚ್ಚು ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಒತ್ತಡದ ಸಂದರ್ಭದಲ್ಲಿ ಕೊಹ್ಲಿ ತಡಬಡಾಯಿಸಿದರೆ ಧೋನಿಯೇ ಮುಂದಾಳತ್ವ ವಹಿಸಿಕೊಳ್ಳುತ್ತಾರೆ. ಈ ಬಗ್ಗೆ ಬೆಂಗಳೂರು ಪಂದ್ಯದ ನಂತರ ಕೊಹ್ಲಿಯನ್ನು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದ್ದಾರೆ.

“ನಾನಿನ್ನೂ ಈ ಮಾದರಿಗೆ ಹೊಸಬ. ನನಗಿಂತ ಹೆಚ್ಚು ಟಿ20 ಪಂದ್ಯ ಆಡಿದ ಅನುಭವ ಧೋನಿ, ಯುವರಾಜ್ ಸಿಂಗ್, ಆಶಿಷ್ ನೆಹ್ರಾ ಅವರಿಗಿದೆ. ಹೀಗಾಗಿ ಅವರ ಹೆಚ್ಚು ಅವರ ಸಲಹೆ ಪಡೆಯುತ್ತೇನೆ. ಗೆಲುವಿನ ಪಾಲು ಹಿರಿಯರಿಗೇ ಸಲ್ಲಬೇಕು” ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಧೋನಿಗೆ ಹೊಗಳಿಕೆಯ ಮಹಾಪೂರ ಹರಿಸುವುದನ್ನು ಕೊಹ್ಲಿ ಮರೆಯಲಿಲ್ಲ. ಅಲ್ಲದೆ 13 ನೇ ಓವರ್ ನಲ್ಲಿ ಪಂದ್ಯಕ್ಕೆ ತಿರುವು ನೀಡುವಂತಹ ಓವರ್ ಮಾಡಿದ ಅಮಿತ್ ಮಿಶ್ರಾ,  ಬ್ಯಾಟಿಂಗ್ ನಲ್ಲಿ ಭರ್ಜರಿ ಮೂರು ಸಿಕ್ಸರ್ ಎತ್ತಿ ಮೊತ್ತ 200 ರ ಗಡಿ ದಾಟುವಂತೆ ಮಾಡಿದ ಯುವರಾಜ್ ಸಿಂಗ್ ಕೊಡುಗೆಯನ್ನೂ ಕೊಹ್ಲಿ ವಿಶೇಷವಾಗಿ ಸ್ಮರಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಮುಂದಿನ ಸುದ್ದಿ
Show comments