Webdunia - Bharat's app for daily news and videos

Install App

2011 ರ ವಿಶ್ವಕಪ್ ನಲ್ಲಿ ಶತಕ ವಂಚಿತನಾಗಲು ಧೋನಿ ಕಾರಣವಾಗಿದ್ದು ಹೇಗೆ ಎಂದು ವಿವರಿಸಿದ ಗೌತಮ್ ಗಂಭೀರ್

Webdunia
ಸೋಮವಾರ, 18 ನವೆಂಬರ್ 2019 (09:23 IST)
ನವದೆಹಲಿ: ಸದಾ ತಮ್ಮ ನೇರ ಮಾತಿನ ಮೂಲಕ ಸುದ್ದಿಯಾಗುವ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ 2011 ರ ವಿಶ್ವಕಪ್ ನಲ್ಲಿ ತಾವು ಶತಕದ ಹೊಸ್ತಿಲಲ್ಲಿ ಎಡವಲು ಧೋನಿ ಕಾರಣವಾಗಿದ್ದು ಹೇಗೆ ಎಂದು ವಿವರಿಸಿದ್ದಾರೆ.


2011 ವಿಶ್ವಕಪ್ ಫೈನಲ್ ಗೆಲುವಿನ ರೂವಾರಿಯಾಗಿದ್ದ ಗಂಭೀರ್ ಆ ಪಂದ್ಯದಲ್ಲಿ 97 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. 31 ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಬಂದಿದ್ದ ಗಂಭೀರ್ ತಮ್ಮ ಅಮೋಘ ಆಟದಿಂದ ತಂಡವನ್ನು ಐತಿಹಾಸಿಕ ಗೆಲುವಿನತ್ತ ಕರೆದೊಯ್ದಿದ್ದರು.

ಆ ಪಂದ್ಯದಲ್ಲಿ ತಾವು 97 ರನ್ ಗೆ ಔಟಾಗಿದ್ದು ಹೇಗೆ ಎಂಬುದನ್ನು ಗಂಭೀರ್ ವಿವರಿಸಿದ್ದಾರೆ. ’97 ರನ್ ಗಳವರೆಗೆ ನನ್ನ ಗಮನ ಕೇವಲ ಶ್ರೀಲಂಕಾ ಟಾರ್ಗೆಟ್ ಚೇಸ್ ಮಾಡುವುದಷ್ಟೇ ಆಗಿತ್ತು. ನನ್ನ ವೈಯಕ್ತಿಕ ರನ್ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ. ಆದರೆ 97 ರನ್ ಗಳಾಗಿದ್ದಾಗ ಇನ್ನೊಂದು ತುದಿಯಲ್ಲಿದ್ದ ಧೋನಿ ನನ್ನ ಬಳಿ ಬಂದು ಇನ್ನು ಮೂರು ರನ್ ಬೇಕು. ಅದನ್ನು ಪೂರ್ತಿ ಮಾಡಿ ಶತಕ ಬಾರಿಸು ಎಂದಿದ್ದರು. ಅಲ್ಲಿಂದ ಇದ್ದಕ್ಕಿದ್ದಂತೆ ನನ್ನ ಗಮನ ಶತಕದತ್ತ ಹರಿಯಿತು. ಇದರಿಂದ ಏಕಾಗ್ರತೆ ಕಳೆದುಕೊಂಡು ಔಟಾದೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments