Select Your Language

Notifications

webdunia
webdunia
webdunia
webdunia

ಧೋನಿ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ವೀರೇಂದ್ರ ಸೆಹ್ವಾಗ್

ಧೋನಿ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ವೀರೇಂದ್ರ ಸೆಹ್ವಾಗ್
NewDelhi , ಭಾನುವಾರ, 8 ಜನವರಿ 2017 (07:04 IST)
ನವದೆಹಲಿ: ಯಾರದ್ದೇ ವಿಶೇಷ ದಿನವಿರಲಿ, ದೇಶದಲ್ಲಿ ಯಾವುದೇ ಹೊಸ ಬೆಳವಣಿಗೆಗಳಾಗಲಿ, ವೀರೇಂದ್ರ ಸೆಹ್ವಾಗ್ ಟ್ವಿಟರ್ ನಲ್ಲೊಂದು ಅದ್ಭುತ ಟ್ವೀಟ್ ಮಾಡುತ್ತಾರೆ. ಆದರೆ ಧೋನಿ ನಾಯಕತ್ವ ತ್ಯಜಿಸಿದ ವಿಚಾರದಲ್ಲಿ ಇದುವರೆಗೆ ಮೌನವಾಗಿದ್ದ ವೀರೂ ಕೊನೆಗೂ ತುಟಿ ಬಿಚ್ಚಿದ್ದಾರೆ.


“ಧೋನಿ ಜನವರಿ ನಾಲ್ಕರಂದು ವಿದಾಯ ಹೇಳಿದರು. ನಾನು ಏಳನೇ ತಾರೀಖಿನವರೆಗೆ ಕಾದು ಅವರ ಮುಂದಿನ ವೃತ್ತಿ ಜೀವನಕ್ಕೆ ಶುಭ ಕೋರುತ್ತಿದ್ದೇನೆ. ಯಾಕೆಂದರೆ ಧೋನಿಗೆ ಏಳನೇ  ಸಂಖ್ಯೆ ಅದೃಷ್ಟವಲ್ಲವೇ?  ಹಾಗಾಗಿ ಅದೇ ದಿನ ಅವರಿಗೆ ವಿಶ್ ಮಾಡುವುದು ಸೂಕ್ತವೆನಿಸಿತು. ಅದಕ್ಕೆ ಈವತ್ತು ಮಾಡುತ್ತಿದ್ದೇನೆ” ಎಂದು ವೀರೂ ಟ್ವೀಟ್ ಮಾಡಿದ್ದಾರೆ.

ಜತೆಗೆ ಧೋನಿಯ ಗುಣಗಾನ ಮಾಡುವುದನ್ನೂ ಮರೆಯಲಿಲ್ಲ. ಆತನ ನಾಯಕನಾಗಿ ಮಾತ್ರವಲ್ಲ, ಒಬ್ಬ ಉತ್ತಮ ಮನುಷ್ಯ ಕೂಡಾ. ನಾಯಕನಾಗಿ ಕೊನೆಯ ಪಂದ್ಯದಲ್ಲಿ ಅಮ್ಮನ ಹೆಸರಿನ ಜೆರ್ಸಿ ತೊಟ್ಟು ಆಡಿದ್ದು ವಿಶೇಷವಾಗಿತ್ತು ಎಂದು ವೀರೂ ಸ್ಮರಿಸಿದ್ದಾರೆ.

ಅಲ್ಲಿಗೆ ವೀರೂ ಧೋನಿಗೆ ಯಾಕೆ ವಿಷ್ ಮಾಡಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರ  ಕೊಟ್ಟಿದ್ದಾರೆ. ಜತೆಗೆ ತಮ್ಮಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಆರೋಪಗಳನ್ನೂ ಒರೆಸುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಿತ ಟ್ವೀಟ್ ಮಾಡಿ ಅಳಿಸಿ ಹಾಕಿದ ಹರ್ಭಜನ್ ಸಿಂಗ್! ಅಂತಹದ್ದೇನಿತ್ತು ಅದರಲ್ಲಿ?