Select Your Language

Notifications

webdunia
webdunia
webdunia
webdunia

ನಾಲ್ಕು ಗೆಲುವಿನ ಬಳಿಕವೂ ಧೋನಿಗೆ ಅಸಮಾಧಾನ ಕಡಿಮೆಯಾಗಿಲ್ಲ!

ನಾಲ್ಕು ಗೆಲುವಿನ ಬಳಿಕವೂ ಧೋನಿಗೆ ಅಸಮಾಧಾನ ಕಡಿಮೆಯಾಗಿಲ್ಲ!
ಚೆನ್ನೈ , ಗುರುವಾರ, 11 ಏಪ್ರಿಲ್ 2019 (08:47 IST)
ಚೆನ್ನೈ: ತವರು ಚೆನ್ನೈ ಮೈದಾನದಲ್ಲಿ ನಾಲ್ಕು ಗೆಲುವು ಸಾಧಿಸಿದ ಬಳಿಕವೂ ಸಿಎಸ್ ಕೆ ನಾಯಕ ಧೋನಿಗೆ ತವರಿನ ಪಿಚ್ ಮೇಲೆ ಅಸಮಾಧಾನ ಕಡಿಮೆಯಾಗಿಲ್ಲ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಉದ್ಘಾಟನಾ ಪಂದ್ಯದಿಂದಲೂ ಧೋನಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಚೆನ್ನೈ ಪಿಚ್ ನಿಧಾನಗತಿಯಿಂದ ಕೂಡಿದ್ದು, ಇಲ್ಲಿ ಚೆಂಡು ವಿಪರೀತ ತಿರುವು ಪಡೆಯುತ್ತಿದೆ. ಇದರಿಂದ ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸುವುದು ಕಷ್ಟವಾಗುತ್ತಿದೆ.

ಇದೇ ಕಾರಣಕ್ಕೆ ಧೋನಿ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾವು ಮತ್ತೆ ಇಂತಹ ಪಿಚ್ ನಲ್ಲಿ ಆಡಬೇಕೆಂದು ನನಗನಿಸುತ್ತಿಲ್ಲ. ಇಲ್ಲಿ ತುಂಬಾ ಲೋ ಸ್ಕೋರಿಂಗ್ ಪಂದ್ಯಗಳಾಗುತ್ತಿವೆ. ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸಲು ಕಷ್ಟವಾಗುತ್ತಿದೆ’ ಎಂದು ಧೋನಿ ಪಂದ್ಯದ ನಂತರ ಅಸಮಾಧಾನ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಬಿಗ್ ಶಾಕ್! ರೋಹಿತ್ ಶರ್ಮಾಗೆ ಗಾಯ