Select Your Language

Notifications

webdunia
webdunia
webdunia
webdunia

ದ್ವಿತೀಯ ಟಿ-ಟ್ವೆಂಟಿ ಪಂದ್ಯಕ್ಕೆ ಮೊದಲು ಧೋನಿ-ಅನಿಲ್ ಕುಂಬ್ಳೆ ಚರ್ಚೆ

ದ್ವಿತೀಯ ಟಿ-ಟ್ವೆಂಟಿ ಪಂದ್ಯಕ್ಕೆ ಮೊದಲು ಧೋನಿ-ಅನಿಲ್ ಕುಂಬ್ಳೆ ಚರ್ಚೆ
Nagpur , ಭಾನುವಾರ, 29 ಜನವರಿ 2017 (08:34 IST)
ನಾಗ್ಪುರ: ಮೊದಲ ಟಿ-ಟ್ವೆಂಟಿ ಪಂದ್ಯ ಸೋತಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಇಂದು ನಡೆಯಲಿರುವ ಟಿ-ಟ್ವೆಂಟಿ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ದೊಡ್ಡ ತಲೆಗಳು ತಲೆಕೆಡಿಸಿಕೊಂಡು ಕೂತಿವೆ.

 
ಅದರಲ್ಲೂ ಧೋನಿ ನಾಯಕತ್ವ ತ್ಯಜಿಸಿದರೂ, ಆಗಾಗ ತಮ್ಮ ತಂಡದ ಆಟಗಾರರಿಗೆ ಉಪಯುಕ್ತ ಸಲಹೆ ನೀಡುತ್ತಲೇ ಇದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಒತ್ತಡಕ್ಕೊಳಗಾದಾಗಲೆಲ್ಲಾ ಧೋನಿ ಬಳಿ ಬಂದು ಚರ್ಚಿಸುತ್ತಾರೆ.

ಇದೀಗ ದ್ವಿತೀಯ ಪಂದ್ಯಕ್ಕೆ ಮೊದಲು ನಡೆದ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಧೋನಿ ಮತ್ತು ಕೋಚ್ ಅನಿಲ್ ಕುಂಬ್ಳೆ ಸುದೀರ್ಘ ಚರ್ಚೆ ನಡೆಸಿದ್ದು, ತಂಡದ ಲೆಕ್ಕಾಚಾರ ಹಾಕಿದ್ದಾರೆ. ತಂಡದ ಸಂಯೋಜನೆ ಕುರಿತು ಈ ಇಬ್ಬರು ನಡೆಸಿದ ದಿಗ್ಗಜರ ಪ್ರಯತ್ನದ ಫಲ ಇಂದಿನ ಪಂದ್ಯದಲ್ಲಿ ಕಂಡರೆ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪದ್ಮ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದ ತಿಳಿಸುವಾಗ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟು ಯಾರಿಗೂ ಗೊತ್ತಾಗಲೇ ಇಲ್ಲ!