Select Your Language

Notifications

webdunia
webdunia
webdunia
webdunia

ಬ್ರೇಕಿಂಗ್!! ಧೋನಿ ನಾಯಕತ್ವ ತ್ಯಜಿಸುವಂತೆ ಸೂಚಿಸಿದ್ದು ಬಿಸಿಸಿಐ?!

ಬ್ರೇಕಿಂಗ್!! ಧೋನಿ ನಾಯಕತ್ವ ತ್ಯಜಿಸುವಂತೆ ಸೂಚಿಸಿದ್ದು ಬಿಸಿಸಿಐ?!
Mumbai , ಸೋಮವಾರ, 9 ಜನವರಿ 2017 (10:30 IST)
ಮುಂಬೈ: ಭಾರತ ಸೀಮಿತ ಓವರ್ ಗಳ ನಾಯಕ ಧೋನಿ ನಾಯಕತ್ವ ತ್ಯಜಿಸಿದ್ದು ಎಲ್ಲೆಡೆ ಸುದ್ದಿಯಾಗಿದ್ದು, ಕೊಹ್ಲಿಗಾಗಿ ಅವರೇ ಸ್ಥಾನ ಬಿಟ್ಟುಕೊಟ್ಟರು ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಇದೀಗ ಬಂದ ವರದಿಯನ್ನು ನಂಬುವುದಾದರೆ, ಸ್ವತಃ ಬಿಸಿಸಿಐ ಧೋನಿಗೆ ನಾಯಕತ್ವಕ್ಕೆ ರಾಜೀನಾಮೆ ನೀಡಲು ಸೂಚಿಸಿತ್ತಂತೆ!


ಇದಕ್ಕೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲೇ ವೇದಿಕೆ ಸಿದ್ಧವಾಗಿತ್ತಂತೆ. ಮೊನ್ನೆ ನಡೆದ ಜಾರ್ಖಂಡ್ ರಣಜಿ ಸೆಮಿಫೈನಲ್ ನಲ್ಲಿ ಇದು ಸಮಾಪ್ತಿಯಾಯಿತು ಎನ್ನಲಾಗಿದೆ. 2019 ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸದಾಗಿ ನೇಮಕವಾದ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಹೊಸ ತಂಡವನ್ನು ಕಟ್ಟಲು ರೆಡಿಯಾಗುತ್ತಿತ್ತು.

ಇತ್ತೀಚೆಗೆ ಕೊಹ್ಲಿ ಜನಪ್ರಿಯತೆ ಹೆಚ್ಚಿದ ಹಿನ್ನಲೆಯಲ್ಲಿ ಮತ್ತು ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ರಣಜಿ ಪಂದ್ಯದ ನಡುವೆ ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್ ಧೋನಿಯೊಂದಿಗೆ ಮಾತುಕತೆ ನಡೆಸಿದರು. ಆಗ ಯಾಕೆ ಕೊಹ್ಲಿಯನ್ನೇ ಎಲ್ಲಾ ಮಾದರಿಗೂ ನಾಯಕನಾಗಿ ಮಾಡಬೇಕು ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಧೋನಿ ರಾಜೀನಾಮೆ ನೀಡಲು ಸೂಚಿಸಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದು ಎಷ್ಟು ಸತ್ಯ, ಸುಳ್ಳು ಎಂದು ಗೊತ್ತಿಲ್ಲ. ಆದರೆ ಧೋನಿ ಇತ್ತೀಚೆಗಷ್ಟೇ 2019 ರವರೆಗೆ ಮುಂದುವರಿಯಲು ಬಯಸಿರುವುದಾಗಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಾಗಾಗಿ ಬಿಸಿಸಿಐ ಪರೋಕ್ಷವಾಗಿ ಧೋನಿಯನ್ನು ಕೆಳಗಿಳಿಸುವುದಕ್ಕೆ ಕಾರಣವಾಯಿತು ಎನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಬಿಸಿಸಿಐ ಪದಚ್ಯುತರ ಅಸಹಕಾರ ಚಳವಳಿ!