Select Your Language

Notifications

webdunia
webdunia
webdunia
webdunia

ಭಾರತ ಸರಣಿಗೂ ಮೊದಲೇ ಶ್ರೀಲಂಕಾ ತಂಡದಲ್ಲೊಂದು ಬಿಗ್ ಶಾಕ್

ಭಾರತ ಸರಣಿಗೂ ಮೊದಲೇ ಶ್ರೀಲಂಕಾ ತಂಡದಲ್ಲೊಂದು ಬಿಗ್ ಶಾಕ್
Colombo , ಬುಧವಾರ, 12 ಜುಲೈ 2017 (10:00 IST)
ಕೊಲೊಂಬೋ: ಮಹತ್ವದ ಭಾರತ ಸರಣಿಗೆ ಮೊದಲು ಶ್ರೀಲಂಕಾ ಕ್ರಿಕೆಟ್ ತಂಡದ ದೊಡ್ಡ ವಿಕೆಟ್ ಪತನವಾಗಿದೆ. ಅಂದರೆ, ಯಶಸ್ವೀ ನಾಯಕನೆಂದೇ ಹೆಗ್ಗಳಿಕೆ ಪಡೆದಿದ್ದ ಆಂಜಲೋ ಮ್ಯಾಥ್ಯೂಸ್ ಮೂರೂ ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.


ದುರ್ಬಲ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಸೋತ ಮೇಲೆ ಬೇಸತ್ತಿರುವ ನಾಯಕ ಮ್ಯಾಥ್ಯೂಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೂ ಮೊದಲು ಮ್ಯಾಥ್ಯೂಸ್ ನಾಯಕತ್ವ ತ್ಯಜಿಸುವ ಸುಳಿವು ನೀಡಿದ್ದರು. ಅದನ್ನೀಗ ನಿಜ ಮಾಡಿದ್ದಾರೆ.

ಜಿಂಬಾಬ್ವೆ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಲಂಕಾ 3-2 ಅಂತರದಿಂದ ಸೋತು ಅವಮಾನ ಅನುಭವಿಸಿದ್ದಾರೆ. ಇದಾದ ಬಳಿಕ ತನ್ನ ನಿರ್ಧಾರ ಪ್ರಕಟಿಸಿರುವ ಮ್ಯಾಥ್ಯೂಸ್ ಇದು ನನ್ನ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಸರಣಿಯಾಗಿತ್ತು ಎಂದು ಬಣ್ಣಿಸಿದ್ದಾರೆ. ಇದರಿಂದಾಗಿ ಮುಂಬರುವ ಭಾರತ ಸರಣಿಗೆ ಲಂಕಾ ಹೊಸ ನಾಯಕನನ್ನು ಹುಡುಕಬೇಕಿದೆ.

ಭಾರತದ ವಿರುದ್ಧ ಲಂಕಾ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಮ್ಯಾಥ್ಯೂಸ್ ಕೂಡಾ ಭಾರತ ಸರಣಿ ಕಠಿಣದ್ದಾಗಲಿದೆ ಎಂದು ಒಪ್ಪಿಕೊಂಡಿದ್ದು, ಅದಕ್ಕಿಂತ ಮೊದಲು ತಮ್ಮ ತಂಡದ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಹ್ವಾಗ್ ಯಾಕೆ ಕೋಚ್ ಹುದ್ದೆಗೆ ಆಯ್ಕೆಯಾಗಲಿಲ್ಲ ಗೊತ್ತೇ?!