Webdunia - Bharat's app for daily news and videos

Install App

ರವೀಂದ್ರ ಜಡೇಜಾರನ್ನು ನೋಡಿ ಕೆಎಲ್ ರಾಹುಲ್ ಅಂದುಕೊಂಡು ಅನಿಲ್ ಕುಂಬ್ಳೆ ಮಾಡಿದ್ದೇನು ಗೊತ್ತಾ?

Webdunia
ಗುರುವಾರ, 27 ಏಪ್ರಿಲ್ 2017 (09:20 IST)
ಮುಂಬೈ: ರವೀಂದ್ರ ಜಡೇಜಾ ಇತ್ತೀಚೆಗೆ ಹೊಸ ಲುಕ್ ನಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ಬದಲಾದ ಕೇಶ ವಿನ್ಯಾಸಕ್ಕೆ ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ.

 
ಜಡೇಜಾರಿಂದ ಹಿಡಿದು ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಸ್ಟೈಲ್ ಪ್ರಿಯರೇ. ಟೀಂ ಇಂಡಿಯಾದ ಹೆಚ್ಚಿನ ಕ್ರಿಕೆಟಿಗರು ದಾಡಿ ಬಿಟ್ಟುಕೊಂಡಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಆಟಗಾರರ ಗುರುತು ಹಚ್ಚುವುದು ಕಷ್ಟವಾಗುತ್ತಿತ್ತಂತೆ.

ಕೆಎಲ್ ರಾಹುಲ್ ಕೂಡಾ ಜಡೇಜಾರಂತೆ ದಾಡಿ ಬಿಟ್ಟುಕೊಂಡಿದ್ದಾರೆ. ಒಂದು ದಿನ ಜಡೇಜಾ ತಲೆ ತಗ್ಗಿಸಿ ಕೂತಿದ್ದರಂತೆ. ಆಗ ಕೋಚ್ ಅನಿಲ್ ಕುಂಬ್ಳೆ, ಜಡೇಜಾರನ್ನು ನೋಡಿ ರಾಹುಲ್ ಅಂದುಕೊಂಡು ಕನ್ನಡದಲ್ಲಿ ಮಾತನಾಡಲು ಪ್ರಾರಂಭಿಸಿ ಬಿಟ್ಟರಂತೆ.

ಇದೇನಪ್ಪಾ ಕೋಚ್ ಸಾಹೇಬರು ನನ್ನ ಬಳಿ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ ಎಂದು ಜಡೇಜಾ ತಲೆ ಎತ್ತಿ ನೋಡಿದಾಗ ಕುಂಬ್ಳೆಗೆ ತಾನು ಮಾತನಾಡಿದ್ದು ತಪ್ಪು ವ್ಯಕ್ತಿಯಲ್ಲಿ ಎಂದು ಗೊತ್ತಾಗಿದೆ. ಅದರ ನಂತರ ಜಡೇಜಾ ತಮ್ಮ ದಾಡಿ ಸ್ಟೈಲ್ ನ್ನು ಚೇಂಜ್ ಮಾಡಲು ನಿರ್ಧರಿಸಿದರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments