Select Your Language

Notifications

webdunia
webdunia
webdunia
webdunia

ರವೀಂದ್ರ ಜಡೇಜಾರನ್ನು ನೋಡಿ ಕೆಎಲ್ ರಾಹುಲ್ ಅಂದುಕೊಂಡು ಅನಿಲ್ ಕುಂಬ್ಳೆ ಮಾಡಿದ್ದೇನು ಗೊತ್ತಾ?

ರವೀಂದ್ರ ಜಡೇಜಾರನ್ನು ನೋಡಿ ಕೆಎಲ್ ರಾಹುಲ್ ಅಂದುಕೊಂಡು ಅನಿಲ್ ಕುಂಬ್ಳೆ ಮಾಡಿದ್ದೇನು ಗೊತ್ತಾ?
Mumbai , ಗುರುವಾರ, 27 ಏಪ್ರಿಲ್ 2017 (09:20 IST)
ಮುಂಬೈ: ರವೀಂದ್ರ ಜಡೇಜಾ ಇತ್ತೀಚೆಗೆ ಹೊಸ ಲುಕ್ ನಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ಬದಲಾದ ಕೇಶ ವಿನ್ಯಾಸಕ್ಕೆ ಕಾರಣವೇನು ಎಂಬುದನ್ನು ಅವರು ವಿವರಿಸಿದ್ದಾರೆ.

 
ಜಡೇಜಾರಿಂದ ಹಿಡಿದು ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಸ್ಟೈಲ್ ಪ್ರಿಯರೇ. ಟೀಂ ಇಂಡಿಯಾದ ಹೆಚ್ಚಿನ ಕ್ರಿಕೆಟಿಗರು ದಾಡಿ ಬಿಟ್ಟುಕೊಂಡಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಆಟಗಾರರ ಗುರುತು ಹಚ್ಚುವುದು ಕಷ್ಟವಾಗುತ್ತಿತ್ತಂತೆ.

ಕೆಎಲ್ ರಾಹುಲ್ ಕೂಡಾ ಜಡೇಜಾರಂತೆ ದಾಡಿ ಬಿಟ್ಟುಕೊಂಡಿದ್ದಾರೆ. ಒಂದು ದಿನ ಜಡೇಜಾ ತಲೆ ತಗ್ಗಿಸಿ ಕೂತಿದ್ದರಂತೆ. ಆಗ ಕೋಚ್ ಅನಿಲ್ ಕುಂಬ್ಳೆ, ಜಡೇಜಾರನ್ನು ನೋಡಿ ರಾಹುಲ್ ಅಂದುಕೊಂಡು ಕನ್ನಡದಲ್ಲಿ ಮಾತನಾಡಲು ಪ್ರಾರಂಭಿಸಿ ಬಿಟ್ಟರಂತೆ.

ಇದೇನಪ್ಪಾ ಕೋಚ್ ಸಾಹೇಬರು ನನ್ನ ಬಳಿ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ ಎಂದು ಜಡೇಜಾ ತಲೆ ಎತ್ತಿ ನೋಡಿದಾಗ ಕುಂಬ್ಳೆಗೆ ತಾನು ಮಾತನಾಡಿದ್ದು ತಪ್ಪು ವ್ಯಕ್ತಿಯಲ್ಲಿ ಎಂದು ಗೊತ್ತಾಗಿದೆ. ಅದರ ನಂತರ ಜಡೇಜಾ ತಮ್ಮ ದಾಡಿ ಸ್ಟೈಲ್ ನ್ನು ಚೇಂಜ್ ಮಾಡಲು ನಿರ್ಧರಿಸಿದರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ವೃತ್ತಿ ಬದುಕು ಮೊಟಕುಗೊಳಿಸಿದ್ದು ಗ್ರೆಗ್ ಚಾಪೆಲ್ ಅಲ್ಲ ಎಂದ ಕ್ರಿಕೆಟಿಗ