Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ಧೋನಿಗೆ ಕಣ್ಣೀರಿನ ವಿದಾಯ ಹೇಳಿದ ಅಂಬಟಿ ರಾಯ್ಡು

ಕ್ಯಾಪ್ಟನ್ ಧೋನಿಗೆ ಕಣ್ಣೀರಿನ ವಿದಾಯ ಹೇಳಿದ ಅಂಬಟಿ ರಾಯ್ಡು
Mumbai , ಗುರುವಾರ, 12 ಜನವರಿ 2017 (11:32 IST)
ಮುಂಬೈ: ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ ಮೇಲೆ ಕೊನೆಯ ಬಾರಿಗೆ ನಾಯಕತ್ವ ವಹಿಸಿದ್ದ ಧೋನಿಗೆ ಬ್ಯಾಟಿಂಗ್ ಬಿಟ್ಟುಕೊಟ್ಟ ಕ್ರಿಕೆಟಿಗ ಅಂಬಟಿ ರಾಯ್ಡು ಪಂದ್ಯದ ನಂತರ ಕ್ಯಾಪ್ಟನ್ ನೆನೆದು ಕಣ್ಣೀರಾದರು.


ಪಂದ್ಯದ ನಂತರ ಮಾತನಾಡಿದ ರಾಯ್ಡು “ಇದು ತುಂಬಾ ಭಾವನಾತ್ಮಕ ಸನ್ನಿವೇಶ. ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕ ಅವರು. ಅವರು ಜೀವಂತ ದಂತಕತೆ. ಈಗಲೂ ಅವರು ಅಷ್ಟೇ ಶಾಂತ ಮೂರ್ತಿ. ನನಗೆ ಅಳುವೇ ಬರುತ್ತಿದೆ. ಅವರು ಯಾವತ್ತೂ ಯುವ ಆಟಗಾರರಿಗೆ ಸಹಾಯ ಮಾಡುತ್ತಿದ್ದರು” ಎಂದು ಕಣ್ಣೀರು ಹಾಕುತ್ತಾ ರಾಯ್ಡು ನಾಯಕನ ಗುಣಗಾನ ಮಾಡಿದರು.

ಹೀಗೆ ಹೇಳುವಾಗ ಅವರ ಕಣ್ಣಲ್ಲಿ ನೀರಿನ ಪೊರೆ ಇತ್ತು. ಅಲ್ಲದೆ ಅವರು ನಾಯಕನಾಗಿದ್ದ ಕೊನೆಯ ಪಂದ್ಯದಲ್ಲಿ ಶತಕ ಭಾರಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ರಾಯ್ಡು ಹೇಳಿಕೊಂಡಿದ್ದಾರೆ. ತಮ್ಮಂತಹವರ ಕ್ರಿಕೆಟ್ ಜೀವನ ಬೆಳೆಯಲು ಧೋನಿಯೇ ಕಾರಣ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಇಟ್ಟ ಬಾಂಬ್ ಗೆ ತಲ್ಲಣಗೊಂಡ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ