Select Your Language

Notifications

webdunia
webdunia
webdunia
webdunia

‘ನನ್ನ ಯಶಸ್ಸಿಗೆ ನಾಯಕ ವಿರಾಟ್ ಕೊಹ್ಲಿಯ ವಿಶ್ವಾಸವೇ ಕಾರಣ’

‘ನನ್ನ ಯಶಸ್ಸಿಗೆ ನಾಯಕ ವಿರಾಟ್ ಕೊಹ್ಲಿಯ ವಿಶ್ವಾಸವೇ ಕಾರಣ’
Nagpur , ಸೋಮವಾರ, 30 ಜನವರಿ 2017 (09:21 IST)
ನಾಗ್ಪುರ: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟಿ-ಟ್ವೆಂಟಿ ಪಂದ್ಯ ಗೆದ್ದು ಕೊಟ್ಟ ಜಸ್ಪ್ರೀತ್ ಬುಮ್ರಾ ಕೊನೆಯ ಎರಡು ಓವರ್ ಗಳನ್ನು ಅದ್ಭುತವಾಗಿ ನಿಭಾಯಿಸುವುದಕ್ಕೆ ನಾಯಕ ವಿರಾಟ್ ಕೊಹ್ಲಿ ತಮ್ಮ ಮೇಲಿಟ್ಟಿದ್ದ ವಿಶ್ವಾಸವೇ ಕಾರಣ ಎಂದಿದ್ದಾರೆ.

 
15 ಓವರ್ ಗಳವರೆಗೂ ಇಂಗ್ಲೆಂಡ್ ಸುಲಭವಾಗಿ ಈ ಪಂದ್ಯವನ್ನು ಗೆಲ್ಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕೊನೆಯ ನಾಲ್ಕು ಓವರ್ ಗಳನ್ನು ಹಿರಿಯ ವೇಗಿ ಆಶಿಷ್ ನೆಹ್ರಾ ಮತ್ತು ಯುವ ಬೌಲರ್ ಜಸ್ಪ್ರೀತ್ ಬುಮ್ರಾ ನಿಭಾಯಿಸಿದ ರೀತಿ ಪಂದ್ಯದ ದಿಕ್ಕನ್ನೇ ಬದಲಾಯಿಸಿತು.

ತಮ್ಮ ಸಾಥಿ ಬುಮ್ರಾಗಾಗಿ ಆದಷ್ಟು ರನ್ ಅಂತರ ಹೆಚ್ಚಿಸಿಕೊಡುವುದು ನೆಹ್ರಾ ಉದ್ದೇಶವಾಗಿತ್ತಂತೆ. ಅದಕ್ಕಾಗಿ ಅವರು ತಮ್ಮೆಲ್ಲಾ ಅನುಭವದ ಧಾರೆಯೆರೆದು ಬೌಲಿಂಗ್ ಮಾಡಿದರು. ಕೊನೆಯ ಓವರ್ ನಲ್ಲಿ ಪ್ರತೀ ಬಾಲ್ ಹಾಕುವ ಮೊದಲು ಬುಮ್ರಾ ಕೊಹ್ಲಿ ಮತ್ತು ನೆಹ್ರಾ ಅವರಲ್ಲಿ ಯಾವ ರೀತಿ ಬಾಲ್ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದರಂತೆ.

ನೆಹ್ರಾ ಯಾರ್ಕರ್ ಎಸೆತ ಹಾಕು. ಸ್ಲೋ ಬಾಲ್ ಹಾಕು ಎನ್ನುತ್ತಿದ್ದರೆ, ಕೊಹ್ಲಿ ಯುವ ಬೌಲರ್ ಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಪರಿಣಾಮವಾಗಿ ನಿಧಾನಗತಿಯ ವಿಕೆಟ್ ಟು ವಿಕೆಟ್ ಬಾಲ್ ಮಾಡಿ ಯಶಸ್ವಿಯಾದರು. ಕೊನೆಯ ಓವರ್ ನಲ್ಲಿ ಕೇವಲ 3 ರನ್ ಕೊಟ್ಟು ಭಾರತಕ್ಕೆ 5 ರನ್ ಗಳ ರೋಮಾಂಚಕ ಗೆಲುವು ಕೊಡಿಸಿ ಸರಣಿ ಸೋಲು ತಪ್ಪಿಸಿದರು ಬುಮ್ರಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದು ಯಾಕೆ?