Select Your Language

Notifications

webdunia
webdunia
webdunia
webdunia

ಹೊಸ ವಿವಾದದ ಕಿಡಿಹೊತ್ತಿಸಿದ ರವಿಶಾಸ್ತ್ರಿ ಹೇಳಿಕೆ

ಹೊಸ ವಿವಾದದ ಕಿಡಿಹೊತ್ತಿಸಿದ ರವಿಶಾಸ್ತ್ರಿ ಹೇಳಿಕೆ
, ಮಂಗಳವಾರ, 1 ಆಗಸ್ಟ್ 2017 (08:44 IST)
ಕೊಲೊಂಬೋ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಭಾರತ ಕಂಡ ಸರ್ವ ಶ್ರೇಷ್ಠ ನಾಯಕ. ಆದರೆ ಹಾಲಿ ನಾಯಕ ಕೊಹ್ಲಿಯೂ ಕಮ್ಮಿಯೇನಲ್ಲ, ಸದ್ಯದಲ್ಲೇ ಆ ಸ್ಥಾನಕ್ಕೆ ಬರಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.


ಧೋನಿಯ ನಾಯಕತ್ವದ ಶೈಲಿಗೆ ಯಾರೂ ಸರಿಸಾಟಿಯಾಗಲ್ಲ. ಹಾಗಿದ್ದರೂ ಕೊಹ್ಲಿಗೆ ಇದಿನ್ನೂ ಆರಂಭದ ದಿನಗಳು ಮುಂದಿನ ದಿನಗಳಲ್ಲಿ ಅವರೂ ಧೋನಿಯ ಸಮಕ್ಕೆ ಬಂದು ನಿಲ್ಲುತ್ತಾರೆ ಎಂದು ಕೋಚ್ ರವಿ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯ ಗೆದ್ದಿರುವ ವಿರಾಟ್ ಕೊಹ್ಲಿ ಆ ಮೂಲಕ ವಿದೇಶದಲ್ಲೂ ನಾಯಕನಾಗಿ ಅತ್ಯುತ್ತಮ ಸಾಧನೆ ತೋರುವ ಲಕ್ಷಣ ತೋರಿದ್ದಾರೆ. ಸಚಿನ್ ಹೊರತುಪಡಿಸಿದರೆ, ಕೊಹ್ಲಿ ಹಾಗೆ ದಾಖಲೆಗಳನ್ನು ಮುರಿಯುತ್ತಿರುವ ಇನ್ನೊಬ್ಬ ಕ್ರಿಕೆಟಿಗನನ್ನು ತಾನು ನೋಡಿಯೇ ಇಲ್ಲ ಎಂದು ರವಿಶಾಸ್ತ್ರಿ ಫುಲ್ ಬೆನ್ನುತಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ, ಯುವರಾಜ್ ವೃತ್ತಿ ಜೀವನ ಶೀಘ್ರದಲ್ಲೇ ಫಿನಿಶ್?!