ಡಬ್ಲ್ಯುಪಿಎಲ್ ಫೈನಲ್: ಸ್ಮೃತಿ ಮಂಧಾನಗೆ ಕನ್ನಡ ಕಲಿಸಿಕೊಟ್ಟ ಶ್ರೇಯಾಂಕ ಪಾಟೀಲ್

Krishnaveni K
ಸೋಮವಾರ, 18 ಮಾರ್ಚ್ 2024 (07:27 IST)
ದೆಹಲಿ: ಡಬ್ಲ್ಯುಪಿಎಲ್ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದ್ಭುತ ಗೆಲುವಿನ ನಂತರ ನಾಯಕಿ ಸ್ಮೃತಿ ಮಂಧಾನ ಕನ್ನಡದಲ್ಲೇ ಅಭಿಮಾನಿಗಳಿಗೆ ಒಂದು ಸಾಲು ಹೇಳಿ ಧನ್ಯವಾದ ಸಲ್ಲಿಸಿದ್ದಾರೆ.

ಅಷ್ಟಕ್ಕೂ ಸ್ಮೃತಿ ಮಂಧಾನ ತಪ್ಪಿಲ್ಲದೇ ಕನ್ನಡದಲ್ಲಿ ಈ ಮಾತು ಹೇಳಲು ಕಾರಣ ಆರ್ ಸಿಬಿ ತಂಡದಲ್ಲಿರುವ ಕನ್ನಡತಿ ಶ್ರೇಯಾಂಕ ಪಾಟೀಲ್. ಫೈನಲ್ ಗೆಲುವಿನ ಖುಷಿಯಲ್ಲಿ ನಾಯಕಿ ಸ್ಮೃತಿ ಮಂಧಾನ ಕೊನೆಯದಾಗಿ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.

‘ನಾನು ಅಭಿಮಾನಿಗಳ ಬೆಂಬಲವನ್ನು ಮರೆಯುವಂತೆಯೇ ಇಲ್ಲ. ಅಭಿಮಾನಿಗಳಿಗೆ ನನ್ನದೊಂದು ವಿಶೇಷ ಸಂದೇಶವಿದೆ. ಪ್ರತೀ ಸಲ ಅವರು ನಮ್ಮನ್ನು ಈ ಸಲ ಕಪ್ ನಮ್ದೇ ಎಂದು ಹುರಿದುಂಬಿಸುತ್ತಾರೆ. ಆದರೆ ಈ ಬಾರಿ ನಾವು ಅವರಿಗೆ ‘ಈ ಸಲ ಕಪ್ ನಮ್ದು’ ಎಂದು ಹೇಳಬೇಕಿದೆ’ ಎಂದು ಕನ್ನಡದಲ್ಲೇ ಹೇಳುವ ಮೂಲಕ ಕನ್ನಡಿಗರ ಮನ ಗೆದ್ದರು.

ಸ್ಮೃತಿ ಮಂಧಾನ ಕನ್ನಡದಲ್ಲಿ ಈ ಸಾಲು ಹೇಳಿದ ಬಳಿಕೆ ‘ನನಗೆ ಕನ್ನಡ ಭಾಷೆ ಗೊತ್ತಿಲ್ಲ. ಆದರೆ ಈವತ್ತು ಈ ಸಾಲುಗಳನ್ನು ಹೇಳಿಕೊಟ್ಟಿದ್ದು ನನ್ನ ತಂಡದ ಸಹ ಆಟಗಾರ್ತಿಯರು. ಅವರು ಹೇಳಿಕೊಟ್ಟಿದ್ದನ್ನು ತಪ್ಪಿಲ್ಲದೇ ಹೇಳಲು ನನಗೋಸ್ಕರ ಪ್ರಾರ್ಥನೆ ಮಾಡಿ ಎಂದು ಹೇಳಿ ಬಂದಿದ್ದೆ’ ಎಂದು ಶ್ರೇಯಾಂಕ ಕಡೆಗೆ ನೋಡಿ ನಕ್ಕರು. ಸ್ಮೃತಿ ಬಾಯಿಯಲ್ಲಿ ಕನ್ನಡ ಸಾಲುಗಳನ್ನು ಕೇಳಿ ಶ್ರೇಯಾಂಕ ಕುಣಿದು ಕುಪ್ಪಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೆಳೆತನ ಅಂದ್ರೆ ಹೀಗಿರಬೇಕು: ಸ್ಮೃತಿ ಮಂಧಾನಗಾಗಿ ದೊಡ್ಡ ನಿರ್ಧಾರ ಕೈಗೊಂಡ ಜೆಮಿಮಾ ರೊಡ್ರಿಗಸ್

ಧೋನಿ ಮನೆಯಲ್ಲಿ ಪಾರ್ಟಿ, ಆದ್ರೆ ಎಲ್ಲರಿಗಿಲ್ಲ ಆಹ್ವಾನ: ಕೊಹ್ಲಿಗೆ ಧೋನಿಯಿಂದ ಸ್ಪೆಷಲ್ ಟ್ರೀಟ್ಮೆಂಟ್

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

ಮುಂದಿನ ಸುದ್ದಿ
Show comments