Webdunia - Bharat's app for daily news and videos

Install App

ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಸುರೇಶ್ ರೈನಾಗೆ ಧೋನಿ ವಾಟರ್ ಸಪ್ಲೈ ಮಾಡಿದ್ದೇಕೆಂಬುದು ಬಹಿರಂಗ!

Webdunia
ಮಂಗಳವಾರ, 3 ಜುಲೈ 2018 (09:24 IST)
ಡುಬ್ಲಿನ್: ಐರ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಹಿರಿಯ ಕ್ರಿಕೆಟಿಗ ಧೋನಿ ಆಡದೇ ವಾಟರ್ ಬಾಯ್ ಆಗಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದರು. ಅಷ್ಟಕ್ಕೂ ಆವತ್ತು ಧೋನಿ ನೀರು ಸರಬರಾಜು ಮಾಡುವ ಕೆಲಸಕ್ಕೆ ಕೈ ಹಾಕಿದ್ದು ಯಾಕೆಂದು ಗೊತ್ತಾಗಿದೆ.
 

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಪತ್ರಕರ್ತರು ಧೋನಿಯನ್ನು ನೀರು ಸರಬರಾಜು ಮಾಡಲು ಮಾಡಲು ಮೈದಾನಕ್ಕೆ ಕಳುಹಿಸಿದ್ದೇಕೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸಿಟ್ಟಿಗೆದ್ದ ಕೊಹ್ಲಿ ಯಾರು ನೀರು ಸರಬರಾಜು ಮಾಡಬೇಕೆಂದು ನಾವು ನಿರ್ಧಾರ ಮಾಡುವುದಲ್ಲ. ಧೋನಿಯೇ ತಾವಾಗಿಯೇ ಹೋದರು ಎಂದಿದ್ದರು.

ಆದರೆ ಈ ಬಗ್ಗೆ ಧೋನಿ ಮಾತ್ರ ಕೂಲ್ ಆಗಿಯೇ ಉತ್ತರಿಸಿದ್ದಾರೆ. ‘ನಾನು ಆವತ್ತು ಪಂದ್ಯವಾಡುತ್ತಿರಲಿಲ್ಲ. ಪೆವಿಲಿಯನ್ ನಲ್ಲೇ ಕೂತು ಪಂದ್ಯ ನೋಡುತ್ತಾ ಬೋರ್ ಆಗುತ್ತಿತ್ತು. ಅದಕ್ಕೇ ನೀರು ಎತ್ತಿಕೊಂಡು ಸೀದಾ ಮೈದಾನಕ್ಕೆ ಹೋದೆ. ಆಗ ಮನೀಶ್ ಪಾಂಡೆ ಬ್ಯಾಟ್ ತುಂಡಾಗಿದೆ ಎಂದರು. ಹಾಗಾಗಿ ಅವರಿಗೆ ಬ್ಯಾಟ್ ಕಿಟ್ ನ್ನೂ ತೆಗೆದುಕೊಂಡು ಹೋಗಿದ್ದೆ’ ಎಂದು ಧೋನಿ ನಗುತ್ತಲೇ ಉತ್ತರಿಸಿ ವಿವಾದ ತಣ್ಣಗಾಗಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Phil Salt: ಮದುವೆಗೆ ಮುನ್ನಾ ಅಪ್ಪ ಆಗಲಿದ್ದಾರೆ ಆರ್‌ಸಿಬಿಯ ಸ್ಟಾರ್ ಬ್ಯಾಟರ್‌

TATA IPL 2025: ಬಾರಿಸಿದ ಸಿಕ್ಸರ್‌ಗೆ ಕಾರಿನ ಗಾಜು ಪುಡಿ ಪುಡಿ, ಖುಷಿಯಲ್ಲಿದ್ದ SRH ಬ್ಯಾಟರ್‌ಗೆ ಬಿತ್ತು ದಂಡ

ಭಾರತ ಟೆಸ್ಟ್ ತಂಡದಲ್ಲಿ ಕನ್ನಡಿಗರಿಗೆ ಖುಲಾಯಿಸಿದ ಅದೃಷ್ಟ: ರಾಹುಲ್‌, ಕರುಣ್‌, ಪ್ರಸಿದ್ಧಗೆ ಮಣೆ ಹಾಕಿದ ಬಿಸಿಸಿಐ

Shubman Gill: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಶುಬ್ಮನ್ ಗಿಲ್ ಕ್ಯಾಪ್ಟನ್: ಫುಲ್ ಟೀಂ ಲಿಸ್ಟ್ ಇಲ್ಲಿದೆ

MS Dhoni: ಮೈಸೂರು ಸ್ಯಾಂಡಲ್ ರಾಯಭಾರಿಯಾಗಿದ್ದ ಧೋನಿ: ಆಗಲೂ ಆಗಿತ್ತು ವಿವಾದ

ಮುಂದಿನ ಸುದ್ದಿ
Show comments