Select Your Language

Notifications

webdunia
webdunia
webdunia
webdunia

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?
ಕೊಲೊಂಬೊ , ಗುರುವಾರ, 3 ಆಗಸ್ಟ್ 2017 (10:16 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ.

 
ಉಭಯ  ತಂಡಗಳೂ ಈ ಪಂದ್ಯಕ್ಕೆ ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ. ಅದರಲ್ಲೂ ವಿಶೇಷವಾಗಿ ಲಂಕಾ ತಂಡಕ್ಕೆ ಈ ಪಂದ್ಯದಲ್ಲಿ  ನಾಯಕ ದಿನೇಶ್ ಚಂಡಿಮಾಲ್ ಪುನರಾಗಮನವಾಗಿದೆ.

ನ್ಯುಮೋನಿಯಾದಿಂದ ಕಳೆದ ಪಂದ್ಯದಲ್ಲಿ ಚಂಡಿಮಾಲ್ ಆಡಿರಲಿಲ್ಲ. ಹೀಗಾಗಿ ಸೋಲಿನ ನಿರಾಶೆಯಲ್ಲಿರವ ಲಂಕಾಗೆ ನಾಯಕನ ವಾಪಸಾತಿ ದೊಡ್ಡ ರಿಲೀಫ್ ಆಗಲಿದೆ. ಇವರಲ್ಲದೆ ಪುಷ್ಪಕುಮಾರ ಲಂಕಾ ತಂಡದ ಪರ ಪದಾರ್ಪಣೆ ಮಾಡಲಿದ್ದಾರೆ.

ಟಾಸ್ ಗೆದ್ದ ಮೇಲೆ ಮಾತನಾಡಿದ ಕೊಹ್ಲಿ ‘ಈ ಪಂದ್ಯಕ್ಕೆ ರಾಹುಲ್ ಆಗಮನವಾಗಲಿದೆ. ಕಳೆದ ಪಂದ್ಯದಲ್ಲಿ ಪಂದ್ಯ ಪುರುಷರಾಗಿದ್ದ ಶಿಖರ್ ಧವನ್ ಈ ಪಂದ್ಯದಲ್ಲೂ ಆಡುತ್ತಾರೆ. ಆದರೆ ಅಭಿನವ್ ಮುಕುಂದ್ ಹೊರಗುಳಿಯಬೇಕಿದೆ. ತಂಡದ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ತಮ್ಮ ಸಂಕಟ ಹೊರಹಾಕಿದ್ದಾರೆ.

ಇದನ್ನೂ ಓದಿ.. ಕೆಎಲ್ ರಾಹುಲ್ ನಾಯಕನ ಮಾತು ಕೇಳಿದ್ದಕ್ಕೂ ಸಾರ್ಥಕವಾಯಿತು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ನಾಯಕನ ಮಾತು ಕೇಳಿದ್ದಕ್ಕೂ ಸಾರ್ಥಕವಾಯಿತು!