ಬಿಸಿಸಿಐ ಗುರುವಾರ ಮಾಜಿ ನಾಯಕ ಅನಿಲ್ ಕುಂಬ್ಳೆಯನ್ನು ಗುರುವಾರ ಭಾರತದ ಕೋಚ್ ಹುದ್ದೆಗೆ ನೇಮಕ ಮಾಡುವಾಗ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮಾತಿಗೆ ಬಿಸಿಸಿಐ, ಸಿಎಸಿ ಮಾನ್ಯತೆ ನೀಡಲಿಲ್ಲವೆಂದು ಗೊತ್ತಾಗಿದೆ.
ಲೆಗ್ ಸ್ಪಿನ್ನರ್ ಮಾಜಿ ಟೀಂ ಡೈರೆಕ್ಟರ್ ರವಿ ಶಾಸ್ತ್ರಿ ಮತ್ತು ಆಯ್ಕೆದಾರರ ಅಧ್ಯಕ್ಷ ಸಂದೀಪ್ ಪಾಟೀಲ್ ಅವರಿಂದ ಕಠಿಣ ಪೈಪೋಟಿಯನ್ನು ಎದುರಿಸಿದ್ದರು. ಆಸಕ್ತಿದಾಯಕ ಸಂಗತಿಯೆಂದರೆ, ಭಾರತದ ಟೆಸ್ಟ್ ನಾಯಕ ಮತ್ತು ಕೆಲವು ಆಟಗಾರರು ಶಾಸ್ತ್ರಿಯನ್ನು ಆದ್ಯತೆಯ ಅಭ್ಯರ್ಥಿ ಎಂದು ಬಿಸಿಸಿಐಗೆ ನಿವೇದಿಸಿದ್ದರು. ಶಾಸ್ತ್ರಿಗೆ ವಿಸ್ತರಣೆ ನೀಡುವ ಕುರಿತು ಕೊಹ್ಲಿ ಮತ್ತು ಬಳಗ ಫೇವರ್ ಆಗಿದ್ದರು.
ಶಾಸ್ತ್ರಿ ಮತ್ತು ಅವರ ಬೆಂಬಲ ಸಿಬ್ಬಂದಿ ಭಾರತ ತಂಡದ ಜತೆ 18 ತಿಂಗಳ ಕಾಲ ಮಹತ್ತರ ಯಶಸ್ಸನ್ನು ಸಾಧಿಸಿದ್ದರು. ಶಾಸ್ತ್ರಿ ಅವರ ನಿಶ್ಚಿಂತೆಯ, ಸಕಾರಾತ್ಮಕ ಮನೋಭಾವವನ್ನು ಆಟಗಾರರು ಮೆಚ್ಚಿದ್ದರು.
ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಶಾಸ್ತ್ರಿಗೆ ಆದ್ಯತೆ ನೀಡಿದ್ದರೂ ಸಿಎಸಿ ಮತ್ತು ಬಿಸಿಸಿಐ ಮೂವರ ತಂಡ ಕುಂಬ್ಳೆ ಅವರನ್ನು ಹೊಸ ಕೋಚ್ ಆಗಿ ಆಯ್ಕೆ ಮಾಡಿದರು. ಲೆಜೆಂಡರಿ ಲೆಗ್ ಸ್ಪಿನ್ನರ್ ಯುವ ಟೆಸ್ಟ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆಂದು ಕಾದುನೋಡಬೇಕು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ