Webdunia - Bharat's app for daily news and videos

Install App

ಇಂತಹ್ದನ್ನು ಕ್ರಿಕೆಟ್ ನಲ್ಲೇ ಕಂಡಿರಲಿಲ್ಲ! ಸಿಟ್ಟಿಗೆದ್ದ ವಿರಾಟ್ ಕೊಹ್ಲಿ

Webdunia
ಸೋಮವಾರ, 16 ಡಿಸೆಂಬರ್ 2019 (09:14 IST)
ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ರವೀಂದ್ರ ಜಡೇಜಾಗೆ ರನೌಟ್ ನೀಡಿದ ಪರಿಗೆ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


48 ನೇ ಓವರ್ ನಲ್ಲಿ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾ ರನ್ ಗಾಗಿ ಓಡಿದಾಗ ಪೊಲ್ಲಾರ್ಡ್ ಎಸೆದ ಚೆಂಡು ವಿಕೆಟ್ ಗೆ ತಗುಲಿ ರನೌಟ್ ಆಗಿದ್ದರು. ಆದರೆ ಇದನ್ನು ಆರಂಭದಲ್ಲಿಯೇ ಗುರುತಿಸದ ಅಂಪಾಯರ್ ಮುಂದಿನ ಎಸೆತಕ್ಕೆ ಸಿದ್ಧರಾಗಿದ್ದರು.

ಆದರೆ ಆಗ ರಿಪ್ಲೇಗಳಲ್ಲಿ ಜಡೇಜಾ ರನೌಟ್ ಆಗಿದ್ದು ಸ್ಪಷ್ಟವಾಯಿತು. ನಂತರ ವಿಂಡೀಸ್ ನಾಯಕ ಪೊಲ್ಲಾರ್ಡ್ ಕೂಡಾ ಅಂಪಾಯರ್ ಬಳಿ ಈ ಬಗ್ಗೆ ಪ್ರಶ್ನಿಸಿದರು. ಆದರೆ ಅದಕ್ಕೆ ತಕ್ಷಣವೇ ಪುರಸ್ಕರಿಸದೇ ಕೆಲವು ಸಮಯದ ಬಳಿಕವಷ್ಟೇ ಅಂಪಾಯರ್ ಥರ್ಡ್ ಅಂಪಾಯರ್ ಗೆ ಮೇಲ್ಮನವಿ ಸಲ್ಲಿಸಿದರು. ಇದು ಕೊಹ್ಲಿ ಸಿಟ್ಟಿಗೆ ಕಾರಣವಾಗಿದೆ. ತಕ್ಷಣವೇ ಮೈದಾನದತ್ತ ಬಂದ ಕೊಹ್ಲಿ ಅಲ್ಲಿಂದಲೇ ಅಂಪಾಯರ್ ವಿರುದ್ಧ ಅಸಮಾಧಾನ ಸೂಚಿಸಿದ್ದರು.

ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ಕೊಹ್ಲಿ ‘ಫೀಲ್ಡರ್ ಔಟಾ ಎಂದಾಗ ಅಂಪಾಯರ್ ನಾಟೌಟ್ ಅಂತಾರೆ. ಹೊರಗೆ ಕುಳಿತು ನೋಡುವ ವ್ಯಕ್ತಿಗಳು ಪಂದ್ಯದ ನಿರ್ಧಾರ ಮಾಡುವಂತಾಗಬಾರದು. ಇಂದು ಇದುವೇ ಸಂಭವಿಸಿದ್ದು. ಅಂಪಾಯರ್ ಗಳು ಮತ್ತು ರೆಫರಿಗಳು ಇದನ್ನು ಗಮನಿಸಬೇಕು. ಇಂತಹದ್ದನ್ನು ಇದುವರೆಗೆ ಕ್ರಿಕೆಟ್ ನಲ್ಲಿ ಕಂಡಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments