ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡುವ ಮೊದಲು ಆಟಗಾರರನ್ನು ಸಿದ್ಧಗೊಳಿಸುವುದಕ್ಕೆ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ಎಂಎಸ್ ಧೋನಿ ನೇತೃತ್ವದಲ್ಲಿ ಅಭ್ಯಾಸ ಶಿಬಿರ ಆಯೋಜಿಸಬೇಕೆಂದಿತ್ತು. ಆದರೆ ಅದಕ್ಕೆ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ರಿಂದ ರವರೆಗೆ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಕೋಚ್ ಅನಿಲ್ ಕುಂಬ್ಳೆ ಮತ್ತು ಎಂಎಸ್ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ ಆಟಗಾರರೆಲ್ಲಾ ಭಾಗವಹಿಸುವುದೆಂದಿತ್ತು. ಅಲ್ಲದೆ ಈ ಅಭ್ಯಾಸ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಏಕದಿನ ತಂಡಕ್ಕೆ ಆರಿಸುವ ಯೋಜನೆಯೂ ಇತ್ತು. ಆದರೆ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಬಿಡುವಿಲ್ಲದೆ ಕ್ರಿಕೆಟ್ ಆಡಿದ ಮೇಲೆ ಈಗಲೇ ಸ್ವಲ್ಪ ದಿನ ಬಿಡುವು ಸಿಕ್ಕಿದೆ. ಈ ವಿರಾಮವನ್ನು ಹಾಳು ಮಾಡುವಂತಹ ಕ್ಯಾಂಪ್ ನ ಔಚಿತ್ಯವೇನು ಎಂಬುದು ಕೊಹ್ಲಿ ಅಸಮಾಧಾನ. ಹಾಗಾಗಿ ಅಂತಹದ್ದೊಂದು ಶಿಬಿರವನ್ನೇ ರದ್ದುಗೊಳಿಸಲು ತೀರ್ಮಾನಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ