Webdunia - Bharat's app for daily news and videos

Install App

ಆಸ್ಟ್ರೇಲಿಯಾ ವಿರುದ್ಧ ಹೀರೋ ಆಗಿದ್ದ ವಿರಾಟ್ ಕೊಹ್ಲಿ ಸ್ವಲ್ಪ ತಪ್ಪಿದ್ರೂ ವಿಲನ್ ಆಗ್ತಿದ್ರು

Krishnaveni K
ಗುರುವಾರ, 6 ಮಾರ್ಚ್ 2025 (11:26 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಗೆಲ್ಲಲು ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಾರಣವಾಗಿತ್ತು. ಆದರೆ ಅವರು ಮಾಡಿದ ಒಂದು ತಪ್ಪಿನಿಂದ ವಿಲನ್ ಕೂಡಾ ಆಗ್ತಿದ್ದರು. ಹೇಗೆ ಇಲ್ಲಿದೆ ನೋಡಿ ವಿವರ.

ತಂಡ ಗೆಲುವಿನ ಸನಿಹದಲ್ಲಿದ್ದಾಗ ಕೊಹ್ಲಿ ಬೇಡದ ಹೊಡೆತಕ್ಕೆ ಕೈ ಹಾಕಿ ಔಟಾದರು. ತಂಡದ ಪ್ಲ್ಯಾನ್ ಪ್ರಕಾರ ಕೆಎಲ್ ರಾಹುಲ್ ದೊಡ್ಡ ಹೊಡೆತಕ್ಕೆ ಕೈ ಹಾಕಬೇಕಿತ್ತು. ಕೊಹ್ಲಿ ಕೊನೆಯ ತನಕ ಕ್ರೀಸ್ ನಲ್ಲಿರಬೇಕಿತ್ತು.

ಆದರೆ ಕೊಹ್ಲಿ ಇಲ್ಲದ ಹೊಡೆತಕ್ಕೆ ಕೈ ಹಾಕಲು ಹೋಗಿ ಔಟಾದರು. ಈ ಪಂದ್ಯವನ್ನು ಭಾರತ ಗೆದ್ದಿರುವುದರಿಂದ ಕೊಹ್ಲಿ ಹೀರೋ ಆಗಿಯೇ ಉಳಿದುಕೊಂಡರು. ಒಂದು ವೇಳೆ ಭಾರತ ಸೋತಿದ್ದರೆ ಅವರು ವಿಲನ್ ಆಗುತ್ತಿದ್ದರು.

ಕೊಹ್ಲಿ ಔಟಾದಾಗ ಪಕ್ಕದಲ್ಲಿದ್ದ ಕೆಎಲ್ ರಾಹುಲ್ ಜೊತೆಗೆ ಕೋಚ್ ಗೌತಮ್ ಗಂಭೀರ್ ಕೂಡಾ ಸಿಟ್ಟಾಗಿದ್ದರು. ಇಲ್ಲದ ಹೊಡೆತಕ್ಕೆ ಯಾಕೆ ಕೈ ಹಾಕಿದ ಎಂದು ಪಕ್ಕದಲ್ಲಿದ್ದ ಸಹಾಯಕ ಸಿಬ್ಬಂದಿ ಜೊತೆ ಗಂಭೀರ್ ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲ, ಪೆವಿಲಿಯನ್ ಗೆ ಬಂದ ಕೊಹ್ಲಿ ಜೊತೆಯೂ ಈ ಬಗ್ಗೆ ಮಾತನಾಡಿದ್ದರು.

ಒಂದು ವೇಳೆ ಟೀಂ ಇಂಡಿಯಾ ಕೊಹ್ಲಿ ಮಾಡಿದ ತಪ್ಪಿನಿಂದ ಸೋತು ಹೋಗಿದ್ದರೆ ಅವರು ಇಂದು ಎಲ್ಲರ ಟೀಕೆಗೆ ಗುರಿಯಾಗುತ್ತಿದ್ದರು. ಆದರೆ ಕೆಎಲ್ ರಾಹುಲ್ ಅದನ್ನು ತಪ್ಪಿಸಿದರು. ಕೊಹ್ಲಿ ಹೀರೋ ಆಗಿಯೇ ಉಳಿದುಕೊಂಡರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Gautam Gambhir: ಗೌತಮ್ ಗಂಭೀರ್ ತಾಯಿಗೆ ಗಂಭೀರ: ಭಾರತಕ್ಕೆ ಮರಳಿದ ಟೀಂ ಇಂಡಿಯಾ ಕೋಚ್

Shubman Gill: ಸಚಿನ್, ಕೊಹ್ಲಿಗೇ ಇಲ್ಲದ ಅಹಂ ಶುಬ್ಮನ್ ಗಿಲ್ ತಲೆಗೆ ಹತ್ತಿದ್ಯಾ: ನೆಟ್ಟಿಗರ ಆಕ್ರೋಶ

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

ಮುಂದಿನ ಸುದ್ದಿ
Show comments