Webdunia - Bharat's app for daily news and videos

Install App

ವಿಜಯ್ ಹಜಾರೆ ಟ್ರೋಫಿ: ಚಾಂಪಿಯನ್ ಆದ ಕರ್ನಾಟಕ ತಂಡ

Webdunia
ಶುಕ್ರವಾರ, 25 ಅಕ್ಟೋಬರ್ 2019 (17:08 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 60 ರನ್ ಗಳ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಮಳೆಯಿಂದಾಗಿ ಆಟ ಪೂರ್ತಿ ನಡೆಯಲಿಲ್ಲ. ಹೀಗಾಗಿ ವಿಜೆಡಿ ನಿಯಮ(ಡಕ್ ವರ್ತ್ ಲೂಯಿಸ್ ನಿಯಮಕ್ಕೆ ಸಮಾನವಾಗಿ ದೇಶೀಯವಾಗಿ ಬಳಸುವ ನಿಯಮ)ದ ಪ್ರಕಾರ ಫಲಿತಾಂಶ ನಿರ್ಧರಿಸಲಾಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು 49.5 ಓವರ್ ಆಡಿ 252 ರನ್ ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 23 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 146 ರನ್ ಗಳಿಸುವಷ್ಟರಲ್ಲಿ ಮಳೆಯ ಆಗಮನವಾಯಿತು. ಈ ವೇಳೆ ಕೆಎಲ್ ರಾಹುಲ್ 52 ಮತ್ತು ಮಯಾಂಕ್ ಅಗರ್ವಾಲ್ 69 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಬಳಿಕ ಮಳೆ ನಿಲ್ಲುವ ಸೂಚನೆ ಕಾಣದ ಕಾರಣ ವಿಜೆಡಿ ನಿಯಮದ ಅನುಸಾರ ವಿಜೇತರನ್ನು ನಿರ್ಧರಿಸಲಾಯಿತು. ಈ ಮೂಲಕ ಕರ್ನಾಟಕ ನಾಲ್ಕನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆದಂತಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Team India: ಡ್ರೆಸ್ಸಿಂಗ್ ರೂಂ ಮಾಹಿತಿ ಲೀಕ್: ಗೌತಮ ಗಂಭೀರ್ ಪಟಾಲಂ ಸೇರಿದಂತೆ ಸಹಾಯಕ ಸಿಬ್ಬಂದಿಗಳನ್ನು ಕಿತ್ತೆಸೆದ ಬಿಸಿಸಿಐ

IPL 2025: ನಾಲ್ಕು ವರ್ಷಗಳೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಸೂಪರ್ ಓವರ್: ಕೆಎಲ್ ರಾಹುಲ್ ಅಗ್ರೆಷನ್ ವಿಡಿಯೋ ನೋಡಿ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

ವಿಚ್ಛೇದನ ಪಡೆದ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಪ್ರತಿಭೆಯನ್ನು ಕೊಂಡಾಡಿದ ಆಪ್ತ ಗೆಳತಿ ಆರ್‌ಜೆ ಮಹ್ವಾಶ

IPL 2025: ತವರಿನಲ್ಲಿ ಕಡಿಮೆ ರನ್‌ ಮಾಡಿಯೂ ಗೆದ್ದುಬೀಗಿದ ಪಂಜಾಬ್‌ ಕಿಂಗ್ಸ್‌: ಕೋಲ್ಕತ್ತಕ್ಕೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments