Video: ತೆಲಂಗಾಣದಲ್ಲಿ ಮತ್ತೊಂದು ಭೀಕರ ಆಕ್ಸಿಡೆಂಟ್: 16 ಸಾವು

Krishnaveni K
ಸೋಮವಾರ, 3 ನವೆಂಬರ್ 2025 (10:19 IST)
Photo Credit: X
ಹೈದರಾಬಾದ್: ಕರ್ನೂಲ್ ಬಸ್ ದುರಂತದ ಶಾಕ್ ಮಾಸುವ ಮುನ್ನವೇ ತೆಲಂಗಾಣದಲ್ಲಿ ಮತ್ತೊಂದು ಭೀಕರ ಬಸ್ ದುರಂತ ಸಂಭವಿಸಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವಲ್ಲಾ ಬಳಿಯ ಮಿರ್ಜಗುಡ್ಡದಲ್ಲಿ ಹೈದರಾಬಾದ್- ಬಿಜಾಪುರ ಹೆದ್ದಾರಿಯಲ್ಲಿ ಇಂದು ಬಸ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ 16 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಜಲ್ಲಿ ತುಂಬಿದ್ದಟ್ರಕ್ ಅತೀ ವೇಗದಲ್ಲಿ ಬಂದು ವಿರುದ್ಧ ದಿಕ್ಕಿನಿಂದ ಢಿಕ್ಕಿ ಹೊಡೆದಿದೆ. ಟ್ರಕ್ ಚಾಲಕನ ಅತಿಯಾದ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಲಾರಿಯಲ್ಲಿದ್ದ ಜಲ್ಲಿ ಕಲ್ಲುಗಳು ಬಸ್ ನಲ್ಲಿದ್ದ ಪ್ರಯಾಣಿಕರ ಮೇಲೆ ಬಿದ್ದಿದ್ದರಿಂದ ಹೆಚ್ಚು ಅನಾಹುತವಾಗಿದೆ. ಜಲ್ಲಿಕಲ್ಲುಗಳ ಅಡಿಯಲ್ಲಿ ಹಲವು ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಂದು ವರ್ಷದ ಒಂದು ಮಗು ಸೇರಿದಂತೆ 11 ಮಹಿಳೆಯರು, 9 ಪುರುಷರು ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕನೂ ಮೃತಪಟ್ಟಿರುವುದಾಗಿ ವರದಿಯಾಗಿದೆ. ಒಟ್ಟು 24 ಮಂದಿ ಗಾಯಗೊಂಡಿದ್ದು ಈ ಪೈಕಿ 5 ಜನರ ಪರಿಸ್ಥಿತಿ ಗಂಭೀರವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಫಿ ಸ್ವೀಕರಿಸಲು ಹೊಸ ಸ್ಟೈಲ್.. ಹರ್ಮನ್ ಪ್ರೀತ್ ಕೌರ್ ಮಾಡಿದ್ದು ಪುರುಷ ಕ್ರಿಕೆಟಿಗರೂ ಮಾಡಿಲ್ಲ video

INDW vs SAW: ಪ್ರಶಸ್ತಿ ಗೆದ್ದ ಖುಷಿಯಲ್ಲಿ ಕಾಲಿಗೆ ಬಿದ್ದ ಹರ್ಮನ್ ಪ್ರೀತ್ ಕೌರ್: ಜಯ್ ಶಾ ಏನು ಮಾಡಿದ್ರು ವಿಡಿಯೋ ನೋಡಿ

INDW vs SAW: ಭಾರತ ಮಹಿಳೆಯರ ಚೊಚ್ಚಲ ವಿಶ್ವಕಪ್ ಗೆಲುವು, ರೋಹಿತ್ ಶರ್ಮಾ ಕಣ್ಣೀರು

INDW vs SAW: ವರ್ಮ, ಶರ್ಮ ಕಮಾಲ್, ಭಾರತ ಮಹಿಳೆಯರಿಗೆ ಚೊಚ್ಚಲ ವಿಶ್ವಕಪ್

IND vs AUS T20: ಕೊನೆಗೂ ಲಯಕ್ಕೆ ಬಂದ ಭಾರತ, ಸರಣಿ ಸಮಬಲ

ಮುಂದಿನ ಸುದ್ದಿ
Show comments