ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನಕ್ಕೆ ವಿದ್ಯಾವಂತ ಆಟಗಾರರ ಕೊರತೆಯೇ ಕಾರಣ ಎಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ವಿಶ್ಲೇಷಿಸಿದ್ದಾರೆ. ಕ್ವೆಟ್ಟಾದಲ್ಲಿ ಮಾಧ್ಯಮದ ಜತೆ ಮಾತನಾಡುತ್ತಾ, ಪ್ರಸಕ್ತ ಮಿಶಬ್ ಉಲ್ ಹಕ್ ಮಾತ್ರ ತಂಡದಲ್ಲಿ ಸೂಕ್ತ ವಿದ್ಯಾವಂತ. ಮಿಶಬ್ ಬಿಟ್ಟರೆ ಯಾರೂ ಪದವೀಧರ ಆಟಗಾರ ತಂಡದಲ್ಲಿಲ್ಲ. ತಂಡದಲ್ಲಿ ವಿದ್ಯಾವಂತ ಆಟಗಾರರ ಕೊರತೆಯು ತಂಡದ ಪತನಕ್ಕೆ ಮುಖ್ಯ ಕಾರಣ ಎಂದು ಶಹರ್ ಯಾರ್ ಖಾನ್ ಹೇಳಿದರು.
ಭವಿಷ್ಯದಲ್ಲಿ ನಾವು ತಂಡದಲ್ಲಿ ವಿದ್ಯಾವಂತ ಆಟಗಾರರಿಗೆ ಪ್ರೋತ್ಸಾಹಿಸಿ, ಪ್ರತಿಭಾವಂತ ಆಟಗಾರರಿಗೆ ಸಾಣೆ ಹಿಡಿಯುತ್ತೇವೆ ಎಂದು ಅವರು ಹೇಳಿದರು.
ಶಿಸ್ತು ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳದಿರಲು ಮಂಡಳಿ ನಿರ್ಧರಿಸಿದೆ. ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್ ಅವರನ್ನು ಅಶಿಸ್ತಿನ ಕಾರಣದಿಂದ ಆಯ್ಕೆ ಮಾಡಲಿಲ್ಲ. ಶಿಸ್ತು ಮತ್ತು ಫಿಟ್ನೆಸ್ ವಿಷಯಗಳಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಖಾನ್ ತಿಳಿಸಿದರು.