Webdunia - Bharat's app for daily news and videos

Install App

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿ ಘೋಷಣೆ ತಡವಾಗಿದ್ದಕ್ಕೆ ಇದೇ ಕಾರಣ

Krishnaveni K
ಬುಧವಾರ, 10 ಜುಲೈ 2024 (08:40 IST)
ಮುಂಬೈ: ರಾಹುಲ್ ದ್ರಾವಿಡ್ ರಿಂದ ತೆರವಾದ ಟೀಂ ಇಂಡಿಯಾ ಮುಂದಿನ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ರನ್ನು ಆಯ್ಕೆ ಮಾಡಲಾಗಿದೆ. ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ.

ಗೌತಮ್ ಗಂಭೀರ್ ಟೀಂ ಇಂಡಿಯಾ ಮುಂದಿನ ಕೋಚ್ ಎನ್ನುವುದು ಹೆಚ್ಚು ಕಡಿಮೆ ಫಿಕ್ಸ್ ಆಗಿತ್ತು. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರಲಿಲ್ಲ. ಗಂಭೀರ್ ಕೆಕೆಆರ್ ತಂಡಕ್ಕೆ ಗುಡ್ ಬೈ ಹೇಳಿ, ಈಡನ್ ಗಾರ್ಡನ್ ನಲ್ಲಿ ವಿದಾಯ ವಿಡಿಯೋವೊಂದರ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಹೀಗಿದ್ದರೂ ಘೋಷಣೆ ಯಾಕಾಗಿಲ್ಲ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಅವರನ್ನು ಕೋಚ್ ಹುದ್ದೆಗೆ ತಡವಾಗಿ ಘೋಷಣೆ ಮಾಡಲು ಕಾರಣವೂ ಇದೆ. ಗೌತಮ್ ಗಂಭೀರ್ ಜೊತೆಗೆ ಈಗಾಗಲೇ ಬಿಸಿಸಿಐ ಕೋಚ್ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ವೇತನ ವಿಚಾರ ಇನ್ನೂ ಫೈನಲ್ ಆಗಿರಲಿಲ್ಲ. ರಾಹುಲ್ ದ್ರಾವಿಡ್ 12 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಗಂಭೀರ್ ಅದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದರಂತೆ.

ಈ ವಿಚಾರವಾಗಿ ಈಗ ಬಿಸಿಸಿಐ ಜೊತೆ ಗಂಭೀರ್ ಮಾತುಕತೆ ನಡೆಯುತ್ತಿತ್ತು. ಸಂಭಾವನೆ, ಎಷ್ಟು ವರ್ಷದ ಒಪ್ಪಂದ ಇತ್ಯಾದಿ ವಿಚಾರಗಳು ಇನ್ನೂ ಫೈನಲ್ ಆಗಿರಲಿಲ್ಲ. ಇದೀಗ ಇದೆಲ್ಲವೂ ಅಂತಿಮವಾದ ಬಳಿಕ ಅಧಿಕೃತವಾಗಿ ಗಂಭೀರ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Stampede: ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹1ಕೋಟಿ ಪರಿಹಾರ ನೀಡಲು ಹೆಬ್ಬಾಳಕರ ಒತ್ತಾಯ

RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ

Gautam Gambhir: ಪೆಟ್ರೋಲ್ ಬಂಕ್ ಫೀಲ್ ಬರ್ತಾ ಇದ್ಯಲ್ಲೋ.. ಟ್ರೋಲ್ ಆಯ್ತು ಟೀಂ ಇಂಡಿಯಾ ಹೊಸ ಜೆರ್ಸಿ

Virat Kohli: ಟ್ರೋಫಿ ಗೆದ್ದಾಗ ಕೊಹ್ಲಿಗೆ ಕಣ್ಣೀರು ಬಂತು, ಅಭಿಮಾನಿ ಸತ್ತಾಗ ಬರಲಿಲ್ಲ ಯಾಕೆ

ಮುಂದಿನ ಸುದ್ದಿ
Show comments