Webdunia - Bharat's app for daily news and videos

Install App

ಟೀಂ ಇಂಡಿಯಾ ಸೋಲಿಗೆ ಈ ಆಟಗಾರರೇ ಕಾರಣ!

Webdunia
ಶನಿವಾರ, 9 ಮಾರ್ಚ್ 2019 (09:01 IST)
ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 32 ರನ್ ಗಳ ಸೋಲುಂಡಿದೆ.


ಒಂದು ವೇಳೆ ನಿನ್ನೆ ಪಂದ್ಯ ಗೆದ್ದಿದ್ದರೆ ಟೀಂ ಇಂಡಿಯಾ ನಿನ್ನೆಯೇ ಸರಣಿ ಗೆಲುವು ಕಾಣುತ್ತಿತ್ತು. ಆದರೆ ಧೋನಿ ತವರೂರಿನಲ್ಲಿ ಸೋಲುವ ಮೂಲಕ ಕನಸು ನುಚ್ಚುನೂರಾಯ್ತು.

ಆಸ್ಟ್ರೇಲಿಯಾ ನೀಡಿದ 314 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ 48.2 ಓವರ್ ಗಳಲ್ಲಿ 281 ರನ್ ಗಳಿಗೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಅಬ್ಬರದ ಇನಿಂಗ್ಸ್ ಆಡಿ 95 ಎಸೆತಗಳಲ್ಲಿ 123 ರನ್ ಗಳಿಸಿದರು. ಆದರೆ ಅವರಿಗೆ ಉಳಿದ ಯಾವುದೇ ಆಟಗಾರರೂ ಸಾಥ್ ನೀಡದೇ ಇದ್ದಿದ್ದರಿಂದ ಟೀಂ ಇಂಡಿಯಾ ಸೋತು ಹೋಯಿತು.

ಅದರಲ್ಲೂ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದು, ಆರಂಭಿಕರು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು. ರೋಹಿತ್ ಶರ್ಮಾ 14 ಕ್ಕೆ ವಿಕೆಟ್ ಒಪ್ಪಿಸಿದರೆ, ಧವನ್ ಕೊಡುಗೆ ಕೇವಲ 1 ರನ್. ಇನ್ನು, ತವರಿನಲ್ಲಾದರೂ ಧೋನಿ ಮ್ಯಾಜಿಕ್ ಮಾಡಬಹುದು ಎಂದು ಕಾದಿದ್ದವರಿಗೆ ನಿಧಾನಗತಿಯ ಇನಿಂಗ್ಸ್ ಆಡಿ (42 ಎಸೆತಗಳಲ್ಲಿ 26 ರನ್) ವಿಲನ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಅಂಬಟಿ ರಾಯುಡು ಕೊಹ್ಲಿಗೆ ಸಾಥ್ ನೀಡಿದ್ದರೆ ಫಲಿತಾಂಶವೇ ಬೇರೆಯದಾಗುತ್ತಿತ್ತು. ಆದರೆ ಅವರು ಎರಡೇ ರನ್ ಗಳಿಗೆ ಗಂಟು ಮೂಟೆ ಕಟ್ಟಿದರು.

ಈ ಎಲ್ಲಾ ಆಟಗಾರರ ಕಳಪೆ ಪ್ರದರ್ಶನದ ಜತೆಗೆ ಬೌಲರ್ ಗಳೂ ಎದುರಾಳಿಗಳನ್ನು ನಿಯಂತ್ರಿಸದೇ ಹೋಗಿದ್ದು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments