Webdunia - Bharat's app for daily news and videos

Install App

ಈಗಿನ ಕಲಾವಿದರು ಸೀತೆ-ರಾಮನ ಪಾತ್ರ ಮಾಡಲು ಲಾಯಕ್ಕಲ್ಲ: ಸೀತೆ ಖ್ಯಾತಿಯ ನಟಿ ದೀಪಿಕಾ

Webdunia
ಶನಿವಾರ, 10 ಜೂನ್ 2023 (08:30 IST)
ಮುಂಬೈ: ಆದಿಪುರುಷ್ ಸಿನಿಮಾ ನಿರ್ದೇಶಕ ಓಂ ರಾವತ್ ನಟಿ ಕೃತಿ ಸನನ್ ಗೆ ತಿರುಪತಿ ದೇವಾಲಯದ ಆವರಣದಲ್ಲಿ ಕೆನ್ನೆಗೆ ಮುತ್ತು ಕೊಟ್ಟ ದೃಶ್ಯ ವೈರಲ್ ಆಗುತ್ತಿದ್ದಂತೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಇದೀಗ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯ ಸೀತಾ ಪಾತ್ರಧಾರಿ ದೀಪಿಕಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ಇಂದಿನ ಕಲಾವಿದರು ಸೀತೆ, ರಾಮನಂತಹ ಪುಣ್ಯ ವ್ಯಕ್ತಿಗಳ ಪಾತ್ರ ಮಾಡಲು ಲಾಯಕ್ಕಿಲ್ಲ ಎಂದು ಕಿಡಿ ಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ‘ಇಂದಿನ ನಟ-ನಟಿಯರ ಸಮಸ್ಯೆಯೇ ಇದು. ಅವರು ಆ ಪಾತ್ರದಲ್ಲಿ ಜೀವಿಸುವುದಿಲ್ಲ, ಆ ಪಾತ್ರದೊಳಗೆ ತೊಡಗಿಸಿಕೊಳ್ಳಲ್ಲ. ಅದರ ಭಾವನೆಯೂ ಅವರಲ್ಲಿ ಬರಲ್ಲ. ರಾಮಾಯಣ ಎನ್ನುವುದು ಅವರ ಪಾಲಿಗೆ ಕೇವಲ ಒಂದು ಸಿನಿಮಾವಾಗಿರಬಹುದೇ ಹೊರತು ಭಕ್ತಿ ಇರುವುದಿಲ್ಲ. ಕೃತಿ ಈಗಿನ ಕಾಲದ ನಟಿ. ಆಕೆಗೆ ತಬ್ಬಿಕೊಳ್ಳುವುದು, ಮುತ್ತುಕೊಡುವುದು ಒಂದು ಆತ್ಮೀಯತೆಯ ನಡೆ ಎನಿಸಬಹುದು. ಆದರೆ ಅವರು ಮನಸ್ಸಿನಿಂದ ತಾನು ಸೀತೆಯ ಪಾತ್ರ ಮಾಡಿದ್ದೇನೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ಪಾತ್ರ ಮುಗಿದ ಮೇಲೆ ಅವರು ಆ ಭಾವನೆಯಿಂದಲೇ ಹೊರಬಂದಿರುತ್ತಾರೆ. ಆದರೆ ನಾನು ಸೀತೆಯ ಪಾತ್ರ ಮಾಡಿದ್ದಾಗ ಆ ಪಾತ್ರವೇ ಆಗಿದ್ದೆ, ಅದರಲ್ಲಿ ಜೀವಿಸಿದ್ದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments