Webdunia - Bharat's app for daily news and videos

Install App

ವಿಶ್ವಕಪ್ 2019: ಈ ಥ್ರೀ ಸ್ಟಾರ್ ಗಳಿಂದ ಗೆದ್ದ ಟೀಂ ಇಂಡಿಯಾ

Webdunia
ಗುರುವಾರ, 6 ಜೂನ್ 2019 (09:15 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರನ್ನು ದ.ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವಿನೊಂದಿಗೆ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಭಾರತದ ಗೆಲುವಿಗೆ ಕಾರಣರಾದವರು ಥ್ರೀ ಸ್ಟಾರ್ ಗಳು.


ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾಗೆ ಆರಂಭದಲ್ಲಿಯೇ ಕಾಡಿದವರು ವೇಗಿ ಜಸ್ಪ್ರೀತ್ ಬುಮ್ರಾ. ಭುವನೇಶ್ವರ್ ಕುಮಾರ್  ಅಷ್ಟೇನೂ ಪ್ರಭಾವ ಬೀರದಿದ್ದರೂ ಇನ್ನೊಂದು ತುದಿಯಿಂದ ಅದ್ಭುತವಾಗಿ ಬಾಲ್ ಎಸೆದ ಬುಮ್ರಾ ಎದುರಾಳಿಗಳ ಎರಡು ಪ್ರಮುಖ ವಿಕೆಟ್ ಕಿತ್ತು ಉಸಿರೆತ್ತದಂತೆ ಮಾಡಿದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ ದಾಳಿಗಿಳಿದ ಯಜುವೇಂದ್ರ ಚಾಹಲ್ ಎದುರಾಳಿಗಳಿಗೆ ಸಿಂಹ ಸ್ವಪ್ನರಾದರು. ಅದರಲ್ಲೂ ವಿಶೇಷವಾಗಿ ಹರಿಣಗಳು ಇನ್ನೇನು ಉತ್ತಮ ಜತೆಯಾಟ ಕಟ್ಟುತ್ತಿದ್ದಾರೆ ಎನ್ನುತ್ತಿರುವಾಗಲೇ ನಾಲ್ಕು ವಿಕೆಟ್ ಕಿತ್ತು ರನ್ ಗತಿ ಹೆಚ್ಚದಂತೆ ನೋಡಿಕೊಂಡರು. ಇದರಿಂದಾಗಿ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಲಷ್ಟೇ ಶಕ್ತವಾಯಿತು.

ನಂತರ ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭವೇನೂ ಉತ್ತಮವಾಗಿರಲಿಲ್ಲ. ಆರಂಭದಿಂದಲೂ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ರನ್ ಗಳಿಸಲು ಪರದಾಡಿದರು. ಅದರಲ್ಲೂ ಧವನ್ ಎರಡೆರಡು ಬಾರಿ ಜೀವದಾನ ಪಡೆದರೂ ಅದರ ಲಾಭವೆತ್ತಲಿಲ್ಲ. ವೇಗಿಗಳ ಮುಂದೆ ಮುಗ್ಗರಿಸಿದ ಧವನ್ 8 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಡೆದರು.

ತೀರಾ ನಿಧಾನಗತಿಯಲ್ಲಿ ರನ್ ಗಳಿಸುತ್ತಿದ್ದ ಕೊಹ್ಲಿ ಕೂಡಾ ತಮ್ಮ ಎಂದಿನ ಛಮಕ್ ತೋರಿಸಲಿಲ್ಲ. ರೋಹಿತ್ ಜತೆಗೆ ಕೆಲ ಹೊತ್ತು ಆಟವಾಡಿದರೂ ಅವರ ಇನಿಂಗ್ಸ್ 18 ರನ್ ಗಳಿಗೆ ಮುಕ್ತಾಯ ಕಂಡಿತು. ನಂತರ ಬಂದ ಕೆಎಲ್ ರಾಹುಲ್ ರೋಹಿತ್ ಗೆ ಉತ್ತಮ ಸಾಥ್ ನೀಡಿದರು. 26 ರನ್ ಗಳಿಸಿದ ರಾಹುಲ್ ಔಟಾಗುತ್ತಿದ್ದಂತೆ ಬಂದ ಧೋನಿ ತಮ್ಮ ಅನುಭವಕ್ಕೆ ತಕ್ಕ ಆಟವಾಡಿ ಇನ್ನೇನು ಗೆಲುವಿನ ಗುರಿ ತಲುಪಿದಾಗ 34 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಆದರೆ ಇವರೆಲ್ಲರ ವಿಕೆಟ್ ಉದುರುತ್ತಿದ್ದರೂ ತಾಳ್ಮೆಯ ಆಟವಾಡಿದ ರೋಹಿತ್ ಶರ್ಮಾ ಶತಕ ಸಿಡಿಸಿ (122) ಕೊನೆಯವರೆಗೂ ಅಜೇಯರಾಗುಳಿದು ಭಾರತಕ್ಕೆ ಗೆಲುವು ತಂದುಕೊಟ್ಟರು. ಹೀಗಾಗಿ ಭಾರತದ ಪಾಲಿಗೆ ನಿನ್ನೆ ಬುಮ್ರಾ, ಚಾಹಲ್ ಮತ್ತು ರೋಹಿತ್ ಥ್ರೀ ಸ್ಟಾರ್ ಗಳಾಗಿ ಮಿಂಚಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments