Webdunia - Bharat's app for daily news and videos

Install App

ಮೂರನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ ನೆರವಾದ ಆ ಮೂರು ಮಂದಿ!

Webdunia
ಗುರುವಾರ, 8 ಫೆಬ್ರವರಿ 2018 (08:47 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 124 ರನ್ ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿದೆ.
 

ಟೀಂ ಇಂಡಿಯಾಗೆ ಈ ಗೆಲುವು ತಂದಿತ್ತವರು ಪ್ರಮುಖವಾಗಿ ಮೂರು ಮಂದಿ. ಅವರೆಂದರೆ ವಿರಾಟ್ ಕೊಹ್ಲಿ, ಕುಲದೀಪ್ ಯಾದವ್,  ಯಜುವೇಂದ್ರ ಚಾಹಲ್. ಕೊಹ್ಲಿ ಒಬ್ಬರ ಬ್ಯಾಟಿಂಗ್ ಹೊರತುಪಡಿಸಿದ್ದರೆ ಟೀಂ ಇಂಡಿಯಾ ಬ್ಯಾಟಿಂಗ್ ಕಳಪೆಯಾಗಿತ್ತು. ಚಾಹಲ್-ಯಾದವ್ ಸ್ಪಿನ್ ಜೋಡಿ10 ರಲ್ಲಿ 8 ವಿಕೆಟ್ ತಮ್ಮದಾಗಿಸಿಕೊಂಡಿತು. ಹೀಗಾಗಿ ಈ ಮೂವರು ಆಟಗಾರರದ್ದೇ ಪ್ರಧಾನ ಪಾತ್ರವಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿತು. ವಿರಾಟ್ ಕೊಹ್ಲಿಗೆ ಇತ್ತೀಚೆಗೆ ರನ್ ಗಳಿಸುವುದೆಂದರೆ ನೀರು ಕುಡಿದಷ್ಟೇ ಸುಲಭವೇನೋ ಎನ್ನುವಂತೆ ಆಡಿದರು. 12 ಬೌಂಡರಿ 2 ಸಿಕ್ಸರ್ ಸಹಿತ 160 ರನ್ ಚಚ್ಚಿದರು. ಇದು ಅವರ 34 ನೇ ಏಕದಿನ ಶತಕವಾಗಿತ್ತು. ಆರಂಭಿಕ ಶಿಖರ್ ಧವನ್ ಇವರಿಗೆ 76 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ಮೊತ್ತ ಬೆನ್ನತ್ತಿದ್ದ ಆಫ್ರಿಕನ್ನರಿಗೆ ಮತ್ತೆ ಚಾಹಲ್-ಯಾದವ್ ಸ್ಪಿನ್ ಜೋಡಿ ಬೆಂಡೆತ್ತಿತ್ತು. ಇವರಿಬ್ಬರು ತಲಾ 4 ವಿಕೆಟ್ ಹಂಚಿಕೊಂಡರು. ಅಂತಿಮವಾಗಿ ಆಫ್ರಿಕಾ 40 ಓವರ್ ಗಳಲ್ಲಿ 179 ರನ್ ಗಳಿಗೆ ಆಲೌಟ್ ಆಯಿತು. ಜೆಪಿ ಡುಮಿನಿ ಮಾತ್ರ ಕೊಂಚ ಪ್ರತಿರೋಧ ತೋರಿ 51 ರನ್ ಗಳಿಸಲು ಯಶಸ್ವಿಯಾದರು. ಅಂತೂ ಹ್ಯಾಟ್ರಿಕ್ ಗೆಲುವು ಟೀಂ ಇಂಡಿಯಾ ಪಾಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ವಿಕೆಟ್ ಪತನ: ಗೌತಮ್ ಗಂಭೀರ್ ಆಪ್ತ ರಾಜೀನಾಮೆ

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ

ಫಾರ್ಮ್ ಇಲ್ಲ ಅಂದ್ರೆ ಡ್ರಾಪ್ ಮಾಡೋದು ಸಂಜು ಸ್ಯಾಮ್ಸನ್ ಗೆ ಮಾತ್ರನಾ: ಅಭಿಷೇಕ್ ಶರ್ಮಾ ಏನು ಸ್ಪೆಷಲ್

ಮುಂದಿನ ಸುದ್ದಿ
Show comments