Publish Date: Thu, 29 Jul 2021 (09:49 IST)
Updated Date: Thu, 29 Jul 2021 (09:51 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ತೃತೀಯ ಮತ್ತು ಅಂತಿಮ ಟಿ20 ಪಂದ್ಯ ಇಂದು ಕೊಲೊಂಬೋದಲ್ಲಿ ನಡೆಯಲಿದೆ.
ನಿನ್ನೆ ನಡೆದ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿತ್ತು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿದೆ. ಇಂದಿನ ಪಂದ್ಯವನ್ನು ಗೆದ್ದವರು ಸರಣಿ ಕೈವಶಮಾಡಿಕೊಳ್ಳಲಿದ್ದಾರೆ.
ಕೃನಾಲ್ ಪಾಂಡ್ಯ ಕೊರೋನಾ ಸೋಂಕಿತರಾಗಿರುವುದರಿಂದ ಅವರೊಂದಿಗಿದ್ದ ಆಟಗಾರರೂ ಅನಿವಾರ್ಯವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಇದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಅನುಪಸ್ಥಿತಿ ಭಾರತಕ್ಕೆ ತೀವ್ರವಾಗಿ ಕಾಡಿತ್ತು. ಇವರ ಅಲಭ್ಯತೆಯಿಂದ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗಿರಲಿಲ್ಲ. ಇಂದು ಕೂಡಾ ಹೆಚ್ಚು ಕಡಿಮೆ ಇದೇ ಸ್ಥಿತಿಯಿರಲಿದೆ. ಇಂದಿನ ಪಂದ್ಯವೂ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.