Publish Date: Sat, 12 Aug 2017 (10:07 IST)
Updated Date: Sat, 12 Aug 2017 (10:09 IST)
ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಕಾಯ್ದುಕೊಂಡಿದೆ.
ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಮಹತ್ವದ ಒಂದು ಬದಲಾವಣೆ ಮಾಡಿಕೊಂಡಿದೆ. ಐಸಿಸಿಯಿಂದ ಒಂದು ಪಂದ್ಯ ನಿಷೇಧಕ್ಕೊಳಗಾಗಿರುವ ರವೀಂದ್ರ ಜಡೇಜಾ ಬದಲಿಗೆ ಹಾಲುಗಲ್ಲದ ಹುಡುಗ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.
ಉಳಿದಂತೆ ಅದೇ ತಂಡವನ್ನು ಭಾರತ ತಂಡ ಉಳಿಸಿಕೊಂಡಿದೆ. ಅತ್ತ ಲಂಕಾ ಮೂರು ಬದಲಾವಣೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ರಂಗನಾ ಹೆರಾತ್ ಗಾಯಗೊಂಡಿದ್ದಾರೆ. ಅವರ ಬದಲಿಗೆ ಲಕ್ಷಣ್ ಸಂಡಕನ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕುಮಾರ ಮತ್ತು ಫೆರ್ನಾಂಡೋ ತಂಡಕ್ಕೆ ಬಂದಿದ್ದಾರೆ.