Webdunia - Bharat's app for daily news and videos

Install App

ಕನ್ ಕಷನ್ ಆಯ್ತು, ಇದೀಗ ಟೀಂ ಇಂಡಿಯಾದಿಂದ ಡಿಆರ್ ಎಸ್ ವಿವಾದ

Webdunia
ಬುಧವಾರ, 9 ಡಿಸೆಂಬರ್ 2020 (09:00 IST)
ಸಿಡ್ನಿ: ಮೊದಲ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ತಲೆಗೆ ಚೆಂಡು ತಗುಲಿದ ಬಳಿಕ ಯಜುವೇಂದ್ರ ಚಾಹಲ್ ರನ್ನು ಬದಲಿ ಆಟಗಾರನಾಗಿ ಬಳಸಿದ್ದು, ಟೀಂ ಇಂಡಿಯಾ ಪಾಲಿಗೆ ವಿವಾದವಾಯ್ತು.

 

ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದೆ. ಆಸ್ಟ್ರೇಲಿಯಾ ಇನಿಂಗ್ಸ್ 11 ನೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಗೆ ಎಸೆದ ಬಾಲ್ ಪ್ಯಾಡ್ ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ಸಂದರ್ಭದಲ್ಲಿ ರಾಹುಲ್ ಆಗಲೀ ಬೌಲರ್ ನಟರಾಜನ್ ಆಗಲೀ ಔಟ್ ಗೆ ಮನವಿ ಸಲ್ಲಿಸಲಿಲ್ಲ. ಆದರೆ ಕೊಂಚ ದೂರದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಕೊಹ್ಲಿ ಮೈದಾನದ ಸ್ಕ್ರೀನ್ ನಲ್ಲಿ ರಿಪ್ಲೇ ನೋಡಿ ರಿವ್ಯೂ ಬಳಸಿದರು ಎಂದು ಮ್ಯಾಥ್ಯೂ ವೇಡ್ ಸಹ ಆಟಗಾರನ ಬಳಿ ಹೇಳಿದ್ದು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ. ಕೊಹ್ಲಿ ರಿವ್ಯೂ ಬಳಸಿದಾಗ ವೇಡ್ ಔಟಾಗಿದ್ದರೂ ಕೊಹ್ಲಿ ಸರಿಯಾದ ಸಮಯಕ್ಕೆ ಡಿಆರ್ ಎಸ್ ತೆಗೆದುಕೊಳ್ಳಲಿಲ್ಲವೆಂದು ಅಂಪಾಯರ್ ಔಟ್ ನೀಡಲು ನಿರಾಕರಿಸಿದರು. ಇದರ ಬಗ್ಗೆ ಕೊಹ್ಲಿ ಅಂಪಾಯರ್ ಜತೆ ವಾಗ್ವಾದ ನಡೆಸಿದರು. ಟೀಂ ಇಂಡಿಯಾ ಈ ವಿಚಾರವಾಗಿ ಮತ್ತೆ ವಿವಾದಕ್ಕೊಳಗಾಗಿದ್ದಂತೂ ನಿಜ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಹಾಕಿ ವಿಶ್ವಕಪ್‌ ಮಹಾಸಮರ ನಾಳೆ ಶುರು: ಚಿನ್ನದ ಪದಕದ ಕನವರಿಕೆಯಲ್ಲಿ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments