ಎಷ್ಟು ಚಂದ ತುಳು ಅರ್ಥಮಾಡಿಕೊಳ್ತಾರೆ ಕುಡ್ಲದ ಅಳಿಯ ಸೂರ್ಯಕುಮಾರ್ ಯಾದವ್

Krishnaveni K
ಮಂಗಳವಾರ, 9 ಜುಲೈ 2024 (14:21 IST)
ಮಂಗಳೂರು: ಕ್ಯಾಚ್ ಹಿಡಿದು ವಿಶ್ವಕಪ್ ಗೆಲ್ಲಿಸಿಕೊಟ್ಟ ಸೂರ್ಯಕುಮಾರ್ ಯಾದವ್ ಇದೀಗ ತಮ್ಮ ಪತ್ನಿಯ ತವರೂರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಮಂಗಳೂರು ಮತ್ತು ಉಡುಪಿಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸೂರ್ಯಕುಮಾರ್ ಪತ್ನಿ ದೇವಿಶಾ ಮೂಲತಃ ಕರಾವಳಿಯವರು. ಹೀಗಾಗಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಾಪು ಮಾರಿಗುಡಿಗೆ ಪೂಜೆ ಸಲ್ಲಿಸಿದ್ದಾರೆ. ದೇವರ ದರ್ಶನದ ಬಳಿಕ ಮಾಧ್ಯಮಗಳು ಅವರನ್ನು ಮಾತನಾಡಿಸಿದ್ದು, ಸೂರ್ಯ ಕೂಡಾ ನಗು ನಗುತ್ತಲೇ ಇಲ್ಲಿಗೆ ಬಂದ ಖುಷಿ ಹಂಚಿಕೊಂಡಿದ್ದಾರೆ.

ಐದು ವರ್ಷ ಮೊದಲು ಇಲ್ಲಿಗೆ ಬಂದಿದ್ದೇನೆ. ಈಗ ಸೆಲೆಬ್ರಿಟಿಯಾಗಿ ಬಂದಿದ್ದರೂ ದೇವಾಲಯಕ್ಕೆ ಬಂದಾಗ ನಾನು ಒಬ್ಬ ಸಾಮಾನ್ಯನಾಗಿಯೇ ಫೀಲ್ ಮಾಡುತ್ತಿದ್ದೇನೆ. ಇಲ್ಲಿಗೆ ಬರುವುದು ನನಗೆ ಖುಷಿ. ದೇವರ ಆಶೀರ್ವಾದದಿಂದಲೇ ನಾನು ಇಲ್ಲಿದ್ದೇನೆ ಎಂದು ಹಿಂದಿಯಲ್ಲೇ ಮಾತನಾಡಿದರು.

ಆದರೆ ಸೂರ್ಯ ಪತ್ನಿ ದೇವಿಶಾ ನಿರರ್ಗಳವಾಗಿ ತುಳುವಿನಲ್ಲಿ ಮಾತನಾಡಿದರು. ಯಾವುದೇ ಹರಕೆ ತೀರಿಸಲು ಬಂದಿಲ್ಲ. ಆದರೆ ಇಲ್ಲಿಗೆ ಬಂದಾಗ ದೇವರ ದರ್ಶನ ಮಾಡಬೇಕೆನಿಸಿತು ಎಂದರು. ವಿಶೇಷವೆಂದರೆ ನಡುವೆ ಸೂರ್ಯ ಕೂಡಾ ತುಳು ಭಾಷೆಯ ಶಬ್ಧವೊಂದನ್ನು ಹೇಳಿಕೊಂಡರು. ಅಷ್ಟೇ ಅಲ್ಲದೆ, ಅರ್ಚಕರು ತುಳುವಿನಲ್ಲೇ ಪ್ರಾರ್ಥನೆ ಮಾಡುವಾಗ ಚೆನ್ನಾಗಿ ಅರ್ಥ ಮಾಡಿಕೊಂಡರು.

ಇನ್ನು ಅರ್ಚಕರೂ ಕೂಡಾ ಮುಂದಿನ ಸಲ ಬರುವಾಗ ನಿಮ್ಮ ಪತಿಗೆ ತುಳು ಕಲಿಸಿಕೊಡಿ ಎಂದು ದೇವಿಶಾಗೆ ಸಲಹೆ ಕೊಟ್ಟರು. ದೇವಿಶಾ ಕೂಡಾ ಇದಕ್ಕೆ ನಗುತ್ತಾ ಒಪ್ಪಿಗೆ ಸೂಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ

ಫಾರ್ಮ್ ಇಲ್ಲ ಅಂದ್ರೆ ಡ್ರಾಪ್ ಮಾಡೋದು ಸಂಜು ಸ್ಯಾಮ್ಸನ್ ಗೆ ಮಾತ್ರನಾ: ಅಭಿಷೇಕ್ ಶರ್ಮಾ ಏನು ಸ್ಪೆಷಲ್

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಶ್ರೇಯಸ್‌ ಅಯ್ಯರ್‌ ಪಡೆಗೆ ಮೊದಲ ಸರಣಿಯ ಜಯದ ಪುಳಕ

ZIM VS IND T20I: ಸತತ ಎರಡನೇ ಪಂದ್ಯದಲ್ಲೂ ಎಡವಿದ ಸ್ಟಾರ್ ಬ್ಯಾಟರ್‌, ಅಭಿಷೇಕ್ ಶರ್ಮಾ ಅವರನ್ನು ಕೈಬಿಡಲಾಗುವುದೇ

India vs Zimbabwe 2nd T20I: ಟಾಸ್‌ ಗೆದ್ದ ಜಿಂಬಾಬ್ವೆ, ಬೌಲಿಂಗ್ ಆಯ್ಕೆ

ಮುಂದಿನ ಸುದ್ದಿ
Show comments