Webdunia - Bharat's app for daily news and videos

Install App

ಮೊದಲ ಸರಣಿಯಲ್ಲೇ ಗೌತಮ್ ಗಂಭೀರ್ ಗೆ ಕ್ಲೀನ್ ಸ್ವೀಪ್ ಉಡುಗೊರೆ ಕೊಡ್ತಾರಾ ಸೂರ್ಯಕುಮಾರ್ ಯಾದವ್

Krishnaveni K
ಮಂಗಳವಾರ, 30 ಜುಲೈ 2024 (08:52 IST)
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಂತಾಗಲಿದೆ.

ಗೌತಮ್ ಗಂಭೀರ್ ಗೆ ಟೀಂ ಇಂಡಿಯಾ ಕೋಚ್ ಆಗಿ ಇದು ಮೊದಲ ಸರಣಿಯಾಗಿತ್ತು. ಮೊದಲ ಸರಣಿಯಲ್ಲೇ ಗಂಭೀರ್ ಗೆ ನೂತನ ನಾಯಕ ಸೂರ್ಯಕುಮಾರ್ ಯಾದವ್ ಕ್ಲೀನ್ ಸ್ವೀಪ್ ಉಡುಗೊರೆ ನೀಡುತ್ತಾರಾ ಎಂದು ಕಾದುನೋಡಬೇಕಿದೆ. ಸೂರ್ಯಗೂ ಟಿ20 ನಾಯಕನಾಗಿ ಈ ಸರಣಿ ಕ್ಲೀನ್ ಸ್ವೀಪ್ ಆದರೆ ದೊಡ್ಡ ಕೋಡು ಬಂದಂತೆ.

ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ತಮಗೆ ಸಿಕ್ಕ ಅವಕಾಶವನ್ನು ಅವರು ಬಳಸಿಕೊಳ್ಳಲು ವಿಫಲರಾದರು. ಹೀಗಾಗಿ ಈ ಪಂದ್ಯದಲ್ಲಿ ಗಿಲ್ ವಾಪಸಾದರೆ ಸಂಜು ಮತ್ತೆ ಬೆಂಚ್ ಕಾಯಿಸಬೇಕಾದೀತು.

ಇನ್ನು, ಕಳೆದ ಪಂದ್ಯದಲ್ಲಿ ರಿಯಾನ್ ಪರಾಗ್ ಬೌಲಿಂಗ್ ನಲ್ಲೂ ವಿಕೆಟ್ ಕೀಳಲು ವಿಫಲರಾದರೂ ರನ್ ನಿಯಂತ್ರಣ ಹೇರಿ ಇಂಪ್ರೆಸ್ ಮಾಡಿದ್ದರು. ಹೀಗಾಗಿ ಅಕ್ಸರ್ ಪಟೇಲ್, ರವಿ ಬಿಷ್ಣೋಯ್ ಜೊತೆಗೆ ಪರಾಗ್ ಕೂಡಾ ದಾಳಿಗಿಳಿಯಬಹುದು. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಆರ್‌ಸಿಬಿ ಅಭಿಮಾನಿಗಳಿಗೆ ಟೆನ್ಷನ್ ಮೇಲೆ ಟೆನ್ಷನ್‌, ಇನ್ನೂ ಶುರುವಾಗದ ಪಂದ್ಯಾಟ

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸೇರಿದ ಬೇಬಿ ಎಬಿ: ಇನ್ನಾದರೂ ಪುಟದೇಳುತ್ತಾ ಧೋನಿ ಪಡೆ

KL Rahul Daughter: ಬರ್ತ್ ಡೇ ದಿನ ಮಗಳ ಹೆಸರು ರಿವೀಲ್ ಮಾಡಿದ ಕೆಎಲ್ ರಾಹುಲ್: ಈ ಹೆಸರಿನಲ್ಲಿದೆ ಒಂದು ವಿಶೇಷ

RCB vs PBKS Match: ಈ ಸಲ ಕಪ್ ನಮ್ದೆ ಎಂದಾಗಲೆಲ್ಲ ನಾವು ಕಪ್ ಎತ್ತಿಲ್ಲ, ಅನಿಲ್ ಕುಂಬ್ಳೆ

KL Rahul: ಹ್ಯಾಪೀ ಬರ್ತ್ ಡೇ ಕೆಎಲ್ ರಾಹುಲ್ ಎಂದ ಆರ್ ಸಿಬಿ: ವಿಶ್ ಮಾಡಕ್ಕಾಗುತ್ತೆ, ಟೀಂಗೆ ತಗೊಳ್ಳಕ್ಕೆ ಆಗಲ್ವಾ ಎನ್ನೋದಾ..

ಮುಂದಿನ ಸುದ್ದಿ
Show comments