Webdunia - Bharat's app for daily news and videos

Install App

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ ಕ್ರಿಕೆಟಿಗರಿಗೆ ಆಗುವ ಲಾಭವೇನು ಗೊತ್ತಾ?

Webdunia
ಮಂಗಳವಾರ, 15 ಅಕ್ಟೋಬರ್ 2019 (09:12 IST)
ಮುಂಬೈ: ಟೀಂ ಇಂಡಿಯಾವನ್ನು ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಸೌರವ್ ಗಂಗೂಲಿ. ಭಾರತ ತಂಡ ವಿದೇಶದಲ್ಲೂ ಗೆಲುವಿನ ರುಚಿ ಕಂಡಿದ್ದೇ ಗಂಗೂಲಿಯಿಂದ ಎಂದರೆ ತಪ್ಪಾಗಲಾರದು.


ಅದೇ ಗಂಗೂಲಿ ಈಗ ಕ್ರಿಕೆಟ್ ಆಳುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಹಿಡಿಯುವ ಹಂತದಲ್ಲಿದ್ದಾರೆ. ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ ಅಧಿಕೃತವಾಗಿ ಅಕ್ಟೋಬರ್ 23 ರಂದು ಘೋಷಣೆಯಾಗಲಿದ್ದು, ಗಂಗೂಲಿ ಅಧ್ಯಕ್ಷರಾಗಿ ಬಿಸಿಸಿಐ ಚುಕ್ಕಾಣಿ ಹಿಡಿಯುವ ದ್ವಿತೀಯ ಟೀಂ ಇಂಡಿಯಾ ಮಾಜಿ ನಾಯಕ ಎನಿಸಿಕೊಳ್ಳಲಿದ್ದಾರೆ.

ಗಂಗೂಲಿ ಸ್ವತಃ ಒಬ್ಬ ಕ್ರಿಕೆಟಿಗರಾಗಿ, ನಾಯಕರಾಗಿ ಅನುಭವ ಹೊಂದಿರುವುದರಿಂದ ಅವರಿಗೆ ಕ್ರಿಕೆಟಿಗರ ಕಷ್ಟ ನಷ್ಟಗಳು, ಚೆನ್ನಾಗಿ ಅರಿವಿರುತ್ತದೆ. ಇದುವರೆಗೆ ಬಿಸಿಸಿಐ ಅಧ್ಯಕ್ಷರಾದವರಲ್ಲಿ ಹೆಚ್ಚಿನವರು ಕಡಿಮೆ ಕ್ರಿಕೆಟ್ ಅನುಭವ ಹೊಂದಿದವರು. ಆದರೆ ಕೇವಲ ಆಡಳಿತಾನುಭವ ಹೆಚ್ಚಿದ್ದವರು. ಆದರೆ ಗಂಗೂಲಿಗೆ ಈಗಾಗಲೇ ಕ್ರಿಕೆಟಿಗನಾಗಿಯೂ ಗೊತ್ತು, ಹಾಗೆಯೇ ಆಡಳಿತಾತ್ಮಕ ವಿಚಾರಗಳು, ಸಮಸ್ಯೆಗಳೂ, ಸವಾಲುಗಳೂ ಚೆನ್ನಾಗಿ ಗೊತ್ತು. ಹೀಗಾಗಿ ಅವರು ಬಿಸಿಸಿಐ ಅಧ್ಯಕ್ಷರಾದರೆ ಅದರಿಂದ ಕ್ರಿಕೆಟ್ ಗೆ ಹೆಚ್ಚಿನ ಲಾಭವಾಗಬಹುದು ಎಂದೇ ಎಲ್ಲರ ಲೆಕ್ಕಾಚಾರ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments