Webdunia - Bharat's app for daily news and videos

Install App

ಚಾಂಪಿಯನ್ಸ್ ಟ್ರೋಫಿಯಲ್ಲೀಗ ಬಾಲಂಗೋಚಿಗಳದ್ದೇ ಕಾರುಬಾರು!

ಕೃಷ್ಣವೇಣಿ ಕೆ
ಶನಿವಾರ, 10 ಜೂನ್ 2017 (10:00 IST)
ಲಂಡನ್: ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲ್ಲುವ ತಂಡಗಳ ಪೈಕಿ ಭಾರತ, ಆಸ್ಟ್ರೇಲಿಯಾ, ದ. ಆಫ್ರಿಕಾಗಳಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಈ ದೈತ್ಯರೇ ದುರ್ಬಲರೆದುರು ಸೋತು ಸುಣ್ಣವಾಗುತ್ತಿದ್ದಾರೆ.

 
ದೈತ್ಯ ಶಾರ್ಕ್ ನ್ನು ಮೊದಲು ನುಂಗಿದ ಕೀರ್ತಿ ಪಾಕಿಸ್ತಾನದ್ದು. ಭಾರತದ ವಿರುದ್ಧ ಅಷ್ಟು ಹೀನಾಯವಾಗಿ ಸೋತ ಮೇಲೆ ಪಾಕ್ ಇನ್ನು ಟೂರ್ನಿಯಲ್ಲಿ ಮಕಾಡೆ ಮಲಗುವುದು ಗ್ಯಾರಂಟಿ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ವರುಣನ ಕೃಪೆಯೋ, ಅದೃಷ್ಟದ ಮಹಿಮೆಯೋ ಪಾಕ್ ಆಫ್ರಿಕನ್ನರನ್ನು ಸೋಲಿಸಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿತು.

ನಂತರದ ಸರದಿ ಭಾರತದ್ದು. ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮೊದಲು ಭಾರತವೇ ಫೇವರಿಟ್ ಎನ್ನುವಂತಿತ್ತು. ಆದರೆ 323 ರನ್ ಗಳನ್ನು ಚೇಸ್ ಮಾಡುವಾಗ ಲಂಕಾ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾದ ಗರ್ವಕ್ಕೇ ಕೊಡಲಿಯೇಟು ನೀಡಿದರು. ಮತ್ತೊಂದು ದೈತ್ಯ ಸಂಹಾರವಾಗುವುದರೊಂದಿಗೆ ಭಾರತ ದ. ಆಫ್ರಿಕಾ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು.

ಇದಕ್ಕೆ ಮೂರನೇ ಸೇರ್ಪಡೆ ಬಾಂಗ್ಲಾದೇಶ. ಈ ತಂಡ ಯಾವಾಗಲೂ ದೈತ್ಯ ಸಂಹಾರಿ ಎಂದೇ ಪ್ರಚಲಿತ. ಹಿಂದೊಮ್ಮೆ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೇ ಚಾಕ್ ಕೊಟ್ಟ ಬಾಂಗ್ಲಾ ಹುಡುಗರು ನಿನ್ನೆ ನ್ಯೂಜಿಲೆಂಡ್ ಗೇ ಮಣ್ಣು ಮುಕ್ಕಿಸಿದರು. ಶಕೀಬ್ ಅಲ್ ಹಸನ್ ಮತ್ತು ಮೊಹಮ್ಮದುಲ್ಲಾ ಶತಕ ಬಾರಿಸಿ ತಂಡಕ್ಕೆ ಐದು ವಿಕೆಟ್ ಗಳ ಗೆಲುವು ಒದಗಿಸಿದರು.

ಇದರಿಂದಾಗಿ ಇದೀಗ ಅನಧಿಕೃತವಾಗಿ ಭಾರತ-ದ.ಆಫ್ರಿಕಾ ನಡುವೆ, ಶ್ರೀಲಂಕಾ-ಪಾಕಿಸ್ತಾನ ನಡುವೆ, ಬಾಂಗ್ಲಾದೇಶ-ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ನ ಕಳೆ ಬಂದಿದೆ. ಯಾರು ಗೆಲ್ಲುತ್ತಾರೆ ಎನ್ನುವುದರ ಮೇಲೆ ಸೆಮಿಫೈನಲ್ ನಡೆಯಲಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲೇ ಶುಭಮನ್‌ ಗಿಲ್‌ ಸ್ಮರಣೀಯ ಶತಕ: ದಿಗ್ಗಜರ ಸಾಲಿಗೆ ಯುವ ನಾಯಕ

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಮುಂದಿನ ಸುದ್ದಿ
Show comments