Webdunia - Bharat's app for daily news and videos

Install App

ನಿಯಮಗಳನ್ನು ಗಾಳಿಗೆ ತೂರುವುದೆಲ್ಲಾ ನನ್ನ ಜಾಯಮಾನವಲ್ಲ ಎಂದ ರಾಹುಲ್ ದ್ರಾವಿಡ್!

Webdunia
ಶನಿವಾರ, 10 ಜೂನ್ 2017 (09:10 IST)
ಮುಂಬೈ: ವೈಯಕ್ತಿಕ ಹಿತಾಸಕ್ತಿಯ ಹುದ್ದೆಯಲ್ಲಿರುವವರು ರಾಷ್ಟ್ರೀಯ ಸೇವೆ ಸಲ್ಲಿಸುತ್ತಿರುವ ಬಗ್ಗೆ ಇತ್ತೀಚೆಗೆ ಬಿಸಿಸಿಐಗೆ ರಾಜೀನಾಮೆ ನೀಡಿದ ಅಧಿಕಾರಿ ರಾಮಚಂದ್ರ ಗುಹಾ ಆರೋಪ ಮಾಡಿದ್ದರು. ಇದರಿಂದಾಗಿ ಭಾರತ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಗೊಂದಲದಲ್ಲಿದ್ದಾರಂತೆ.

 
ರಾಮಚಂದ್ರ ಗುಹಾ ರಾಜೀನಾಮೆ ನೀಡುವ ಮೊದಲು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಗೆ ಪತ್ರ ಬರೆದು ರಾಷ್ಟ್ರೀಯ ತಂಡದಲ್ಲಿದ್ದುಕೊಂಡು ಐಪಿಲ್ ಸೇರಿದಂತೆ ವೈಯಕ್ತಿಕ ಹಿತಾಸಕ್ತಿಯ ಹುದ್ದೆಗಳಲ್ಲಿರುವ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಅಂತಹ ಆಟಗಾರರ ಪೈಕಿ ರಾಹುಲ್ ದ್ರಾವಿಡ್,  ಧೋನಿ, ಸುನಿಲ್ ಗವಾಸ್ಕರ್ ಮುಂತಾದವರೂ ಸೇರಿದ್ದರು. ಈ ಪೈಕಿ ಗವಾಸ್ಕರ್ ಗುಹಾ ಅವರನ್ನೇ ಟೀಕಿಸಿ ಸುಮ್ಮನಾಗಿದ್ದರು. ಆದರೆ ದ್ರಾವಿಡ್ ತಮ್ಮ ಗೊಂದಲ ಪರಿಹರಿಸುವಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

‘ನನಗೆ ನೀಡಿದ ಗುತ್ತಿಗೆಯಲ್ಲಿ ಹೇಳಿರುವಂತೆ ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಒಂದು ವೇಳೆ ನಿಯಮಗಳು ನಂತರ ಬದಲಾಗಿದ್ದರೆ, ನಮ್ಮನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ನಿಯಮ ಮುರಿಯುವುದೆಲ್ಲಾ ನನ್ನ ಜಾಯಮಾನವಲ್ಲ. ಹಾಗಾಗಿ ಏನೇ ನಿಯಮಗಳಿದ್ದರೂ, ಅದನ್ನು ಸ್ಪಷ್ಟವಾಗಿ ತಿಳಿಸಿ’ ಎಂದು ದ್ರಾವಿಡ್ ಮನವಿ ಮಾಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲೇ ಶುಭಮನ್‌ ಗಿಲ್‌ ಸ್ಮರಣೀಯ ಶತಕ: ದಿಗ್ಗಜರ ಸಾಲಿಗೆ ಯುವ ನಾಯಕ

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಮುಂದಿನ ಸುದ್ದಿ
Show comments