Webdunia - Bharat's app for daily news and videos

Install App

ರಸ್ತೆಯಲ್ಲಿ ಹೋಗುವ ಮಹಿಳೆಯರೂ ಆರ್ ಸಿಬಿ ಗೆಲುವು ಸಂಭ್ರಮಿಸಿಲ್ಲ: ಸಿದ್ಧಾರ್ಥ್

Krishnaveni K
ಸೋಮವಾರ, 18 ಮಾರ್ಚ್ 2024 (17:31 IST)
ಬೆಂಗಳೂರು: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಲುಪಿಎಲ್ ಟೂರ್ನಿ ಫೈನಲ್ ಪಂದ್ಯ ಗೆದ್ದು ಸಂಭ್ರಮಿಸಿತ್ತು. ಈ ಬಗ್ಗೆ ತೆಲುಗು ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಗೆಲುವು ಸಾಧಿಸಿ ಸಂಭ್ರಮಿಸಿತ್ತು. ಈ ಗೆಲುವಿನ ಬಳಿಕ ಆರ್ ಸಿಬಿ ಫ್ಯಾನ್ಸ್ ಪೈಕಿ ಮಹಿಳೆಯರು ಯಾರೂ ಸಂಭ್ರಮಿಸಲಿಲ್ಲ. ಕೇವಲ ಪುರುಷರು ಮಾತ್ರ ರಸ್ತೆಯಲ್ಲಿ ನಿಂತು ಸಂಭ್ರಮಿಸಿದರು ಎಂದು ನಟ ಸಿದ್ಧಾರ್ಥ್ ವ್ಯಂಗ್ಯ ಮಾಡಿದ್ದಾರೆ.

ಒಂದು ಟೂರ್ನಿಯಲ್ಲಿ ಮಹಿಳೆಯರು ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಪ್ರಶಸ್ತಿಯನ್ನು ಸಂಭ್ರಮಿಸಲು ಒಬ್ಬರೇ ಒಬ್ಬ ಮಹಿಳಾ ಫ್ಯಾನ್ಸ್ ರಸ್ತೆಗಿಳದಿಲ್ಲ. ಭಾರತದ ಪುರುಷ ಪ್ರಧಾನ ವ್ಯವಸ್ಥೆಗೆ ಇದು ತಕ್ಕ ಉದಾಹರಣೆ ಎಂದು ಸಿದ್ಧಾರ್ಥ್ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ವ್ಯಂಗ್ಯ ಮಾಡಿದ್ದಾರೆ.

ರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಬರಲು ಭಾರತದ ಮಹಿಳೆಯರಿಗೆ ಅವಕಾಶ ಇಲ್ಲ ಎಂಬುದನ್ನು ತಿಳಿಸಲು ಈ ಟ್ವೀಟ್ ಮಾಡಿದ್ದೇನೆ. ಸ್ತ್ರೀಯರ ದೊಡ್ಡ ಗೆಲುವನ್ನು ಬೀದಿಯಲ್ಲಿ ಸಂಭ್ರಮಿಸಲು ಪುರುಷರ ರೀತಿ ಮಹಿಳೆಯರಿಗೆ ಸಾಧ‍್ಯವಾಗಿಲ್ಲ ಎಂಬ ವ್ಯಂಗ್ಯ ಇದರಲ್ಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗ್ರ್ಯಾಂಡ್ ಚೆಸ್ ಟೂರ್‌ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ: ಈ ಕಿರೀಟ ಗೆದ್ದ ಮೊದಲ ಭಾರತೀಯ

ಭಾರತ ಮಹಿಳಾ ಕ್ರಿಕೆಟ್ ತಂಡದ ಏಷ್ಯಾ ಕಪ್ ವೇಳಾಪಟ್ಟಿ, ನೇರಪ್ರಸಾರ ಎಲ್ಲಿ ಇಲ್ಲಿದೆ ವಿವರ

IND vs SL: ಫಾಲೋ ಆನ್ ಹೇರಿಯೂ ಗೆಲ್ಲಲಾಗಲಿಲ್ಲ… ಡ್ರೆಸ್ಸಿಂಗ್ ರೂಂನಲ್ಲಿ ಶುಭಮನ್ ಗಿಲ್ ಗೆ ಗಂಭೀರ್ ಕ್ಲಾಸ್

INDvsSL: ವಿಕೆಟ್ ಬೀಳುತ್ತಿಲ್ಲ ಎಂದಾಗ ನಂಬಿಕೆಯ ಮೊರೆ ಹೋದ ಸಿರಾಜ್, ಮ್ಯಾಜಿಕ್ ಮಾಡಿದಾಗ ಬಿತ್ತು ವಿಕೆಟ್

INDvsSL: ಶ್ರೀಲಂಕಾಗೆ ಫಾಲೋ ಆನ್ ಹೇರಿ ತಲೆಮೇಲೆ ಕೈಹೊತ್ತ ಟೀಂ ಇಂಡಿಯಾ, ಪೆವಿಲಿಯನ್ ನಲ್ಲೇ ಗಂಭೀರ್ ಸಿಟ್ಟು

ಮುಂದಿನ ಸುದ್ದಿ
Show comments