Select Your Language

Notifications

webdunia
webdunia
webdunia
webdunia

ಮುಂಬೈ ರಣಜಿ ತಂಡಕ್ಕೆ ಸಚಿನ್ ತೆಂಡುಲ್ಕರ್ ಪಾಠ

ಸಚಿನ್ ತೆಂಡುಲ್ಕರ್
Mumbai , ಬುಧವಾರ, 21 ಡಿಸೆಂಬರ್ 2016 (10:45 IST)
ಮುಂಬೈ: ಸಚಿನ್ ತೆಂಡುಲ್ಕರ್ ತಮ್ಮ ತವರು ರಾಜ್ಯದ ಕ್ರಿಕೆಟ್ ಹುಡುಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಣಜಿ ಟ್ರೋಫಿ ಕ್ರಿಕೆಟ್ ನಲ್ಲಿ ಅಂತಿಮ ಸುತ್ತಿನ ಪಂದ್ಯಗಳಿಗೆ ತಯಾರಾಗುತ್ತಿರುವ ತವರು ತಂಡಕ್ಕೆ ಸಲಹೆ ನೀಡಿದ್ದಾರೆ.

ಡಿಸೆಂಬರ್ 23 ರಿಂದ ರಾಯ್ ಪುರದಲ್ಲಿ ನಡೆಯಲಿರುವ ಹೈದರಾಬಾದ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮುಂಬೈ ತಂಡ ಸಜ್ಜಾಗುತ್ತಿದೆ. ಈ ವೇಳೆ ಅಚಾನಕ್ ಆಗಿ ಭೇಟಿ ಕೊಟ್ಟ ಬ್ಯಾಟಿಂಗ್ ಮಾಂತ್ರಿಕ ಯಶಸ್ಸು ಪಡೆಯುವುದು ಹೇಗೆಂದು ಪಾಠ ಮಾಡಿದ್ದಾರೆ.

ಈ ಋತುವಿನಲ್ಲಿ ಮುಂಬೈ ಆರಂಭಿಕರ ವೈಫಲ್ಯಕ್ಕೊಳಗಾಗಿದೆ. ಇದೇ ವಿಷಯವಾಗಿ ಸಲಹೆ ಕೊಟ್ಟ ತೆಂಡುಲ್ಕರ್, “ಹಿಂದೆಯೂ ನಾವು ಇಂತಹ ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದರೆ ಅದೇ ಒತ್ತಡವನ್ನು ಮೈಮೇಲೆಳೆದುಕೊಂಡಿಲ್ಲ. ಹಾಗಾಗಿ ಅದನ್ನು ಮರೆತು ಆರಾಮವಾಗಿ ಆಡಿ” ಎಂದು ತೆಂಡುಲ್ಕರ್ ಕಿವಿ ಮಾತು ಹೇಳಿದ್ದಾರೆ. ಅಲ್ಲದೆ ಸ್ವಲ್ಪ ಹೊತ್ತು ತಂಡದ ತರಬೇತಿ ನೋಡುತ್ತಾ ನಿಂತ ಸಚಿನ್ ಯುವ ಬ್ಯಾಟ್ಸ್ ಮನ್ ಗಳಾದ ಸೂರ್ಯಕುಮಾರ್ ಯಾದವ್, ಆದಿತ್ಯಾ ತಾರೆಗೆ ಕೆಲವು ಸಲಹೆ ಸೂಚನೆ ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಲೆಸ್ಟರ್ ಕುಕ್ ರಾಜೀನಾಮೆ ಕೊಡಲ್ವಂತೆ!