Webdunia - Bharat's app for daily news and videos

Install App

ರಸ್ತೆ ಮಧ್ಯೆ ಕಾರು ನಿಲ್ಲಿಸಿ ಅಭಿಮಾನಿಗೆ ಸರ್ಪೈಸ್ ಕೊಟ್ಟ ಸಚಿನ್ ತೆಂಡುಲ್ಕರ್

Krishnaveni K
ಶುಕ್ರವಾರ, 2 ಫೆಬ್ರವರಿ 2024 (08:50 IST)
Photo Courtesy: Twitter
ಮುಂಬೈ: ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ನಿವೃತ್ತಿಯಾಗಿ ಎಷ್ಟು ಸಮಯ ಕಳೆದರೂ ಅಭಿಮಾನಿಗಳಲ್ಲಿ ಮಾತ್ರ ಅವರ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಕಾರಿನಲ್ಲಿ ಸಾಗುವಾಗ ರಸ್ತೆಯಲ್ಲಿ ತಮ್ಮ ಹೆಸರಿನ ಜೆರ್ಸಿ ತೊಟ್ಟು ಸ್ಕೂಟಿಯಲ್ಲಿ ಸಾಗುತ್ತಿದ್ದ ಅಭಿಮಾನಿಯನ್ನು ಕಂಡು ಸ್ವತಃ ಸಚಿನ್ ಕಾರು ನಿಲ್ಲಿಸಿ ಸರ್ಪೈಸ್ ಕೊಟ್ಟಿದ್ದಾರೆ. ರಸ್ತೆ ಮಧ‍್ಯೆ ಅನಿರೀಕ್ಷಿತವಾಗಿ ತನ್ನ ಆರಾಧ‍್ಯ ದೈವವನ್ನು ಕಂಡು ಅಭಿಮಾನಿ ಮಾತು ಹೊರಡದೆ ಅರೆಕ್ಷಣ ಕೈ ಮುಗಿದು ನಿಂತಿದ್ದಾನೆ. ಈ ವಿಡಿಯೋವನ್ನು ಸಚಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಜೆರ್ಸಿ ತೊಟ್ಟಿದ್ದ ಅಭಿಮಾನಿ ಅದರ ಹಿಂದೆ ತೆಂಡುಲ್ಕರ್ ಎಂದು ಬರೆದು 10 ಸಂಖ್ಯೆಯನ್ನೂ ಹಾಕಿಸಿಕೊಂಡಿದ್ದರು. ಅವರನ್ನೇ ಹಿಂಬಾಲಿಸುತ್ತಿದ್ದ ಸಚಿನ್ ತನ್ನ ಕಾರು ಚಾಲಕನಿಗೆ ಕಾರು ನಿಲ್ಲಿಸಲು ಸೂಚಿಸಿದ್ದಾರೆ. ಅಭಿಮಾನಿಯನ್ನು ಓವರ್ ಟೇಕ್ ಮಾಡಿ ಕಾರು ನಿಲ್ಲಿಸಿದ ಸಚಿನ್ ತಮಾಷೆಯಾಗಿ ‘ಏರ್ ಪೋರ್ಟ್ ಗೆ ಹೇಗೆ ಹೋಗಬೇಕು’ ಎಂದು ಕೇಳಿದ್ದಾರೆ.

ಯಾರೋ ದಾರಿಹೋಕರು ಎಂದುಕೊಂಡು ಉತ್ತರಕೊಡಲು ಮುಂದಾದ ಅಭಿಮಾನಿ ಸಚಿನ್ ರನ್ನು ನೋಡಿ ಕ್ಷಣ ಕಾಲ ಗರಬಡಿದಂತಾದರು. ಬಳಿಕ ದೇವರನ್ನೇ ನೋಡಿದ ಹಾಗಾಯಿತು ಎಂದು ಕೈ ಮುಗಿದು ನಿಂತಿದ್ದಾರೆ. ವಿಶೇಷವೆಂದರೆ ಆ ಅಭಿಮಾನಿಯ ಸ್ಕೂಟಿಯಲ್ಲಿ ಸಚಿನ್ ಜೊತೆಗಿನ ಹಳೆಯ ಫೋಟೋ, ಆಟೋಗ್ರಾಫ್ ಪುಸ್ತಕ ಎಲ್ಲವೂ ಇತ್ತು. ಅದೆಲ್ಲವನ್ನೂ ತೋರಿಸಿದಾಗ ಸಚಿನ್ ಭಾವುಕರಾದರು. ಜೊತೆಗೆ ಅಭಿಮಾನಿ ಕೈಯಿಂದ ಫೋಟೋ ಪಡೆದು ಈ ಫೋಟೋ ತೆಗೆದಿದ್ದು ನನಗೆ ನೆನಪಿದೆ ಎಂದು ಆ ಫೋಟೋ ಮೇಲೆ ಹಸ್ತಾಕ್ಷರ ನೀಡಿದರು.

ಅಭಿಮಾನಿಯ ಅಭಿಮಾನ ಕಂಡು ಭಾವುಕರಾದ ಸಚಿನ್ ಬಳಿಕ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಲ್ಲದೆ, ‘ಸಚಿನ್ ಮೀಟ್ಸ್ ತೆಂಡುಲ್ಕರ್’ ಎಂದು ಸಂದೇಶವೊಂದನ್ನು ಬರೆದಿದ್ದಾರೆ. ‘ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುವವರನ್ನು ನೋಡುವಾಗ ಎದೆ ತುಂಬಿ ಬರುತ್ತದೆ. ಜಗತ್ತಿನ ಯಾವುದೋ ಮೂಲೆಯಿಂದ ಈ ರೀತಿ ಅನಿರೀಕ್ಷಿತವಾಗಿ ಸಿಗುವ ಪ್ರೀತಿ ನನ್ನ ಜೀವನವನ್ನು ವಿಶೇಷವಾಗಿಸಿದೆ’ ಎಂದು ಭಾವುಕ ಸಾಲುಗಳನ್ನು ಬರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

ಮುಂದಿನ ಸುದ್ದಿ
Show comments