Publish Date: Fri, 19 Aug 2022 (08:30 IST)
Updated Date: Fri, 19 Aug 2022 (08:56 IST)
ಮುಂಬೈ: ಇಂದಿನ ಟಿ20 ಕ್ರಿಕೆಟ್ ಜಮಾನಾದಲ್ಲಿ ಏಕದಿನ ಕ್ರಿಕೆಟ್ ನಶಿಸಿ ಹೋಗುತ್ತಿದೆ ಎಂಬ ಮಾಜಿ ನಾಯಕ ಕಪಿಲ್ ದೇವ್ ಹೇಳಿಕೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.
ಈ ಮೊದಲು ಕೊಹ್ಲಿ ಫಾರ್ಮ್ ವಿಚಾರದಲ್ಲಿ ರೋಹಿತ್ ಕಪಿಲ್ ಹೇಳಿಕೆಗೆ ತಿರುಗೇಟು ನೀಡಿ ಸುದ್ದಿಯಾಗಿದ್ದರು. ಇದೀಗ ಮತ್ತೆ ಕಪಿಲ್ ಹೇಳಿಕೆಯನ್ನು ರೋಹಿತ್ ತಿರಸ್ಕರಿಸಿದ್ದಾರೆ.
ನಾನು ಹೆಸರು ಮಾಡಿದ್ದೇ ಏಕದಿನ ಪಂದ್ಯಗಳಿಂದ. ಏಕದಿನ ನಶಿಸುತ್ತೆ ಎನ್ನುವುದು ಶುದ್ಧ ನಾನ್ ಸೆನ್ಸ್. ಜನ ಮೊದಲು ಟೆಸ್ಟ್ ಕ್ರಿಕೆಟ್ ಅಳಿಸಿ ಹೋಗುತ್ತೆ ಎನ್ನುತ್ತಿದ್ದರು. ನನ್ನ ಪ್ರಕಾರ ಕ್ರಿಕೆಟ್ ಮುಖ್ಯ. ಅದು ಯಾವುದೇ ಫಾರ್ಮ್ಯಾಟ್ ಇರಲಿ ಪಂದ್ಯವಾಡುವುದು ಮುಖ್ಯ ಎಂದಿದ್ದಾರೆ ರೋಹಿತ್.