Webdunia - Bharat's app for daily news and videos

Install App

ರವಿಚಂದ್ರನ್ ಅಶ್ವಿನ್ ಒಂದು ದಿನ ಗೈರು: ನಿಯಮ ಏನು ಹೇಳುತ್ತದೆ

Krishnaveni K
ಶನಿವಾರ, 17 ಫೆಬ್ರವರಿ 2024 (09:59 IST)
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಡುವೆ ರವಿಚಂದ್ರನ್ ಅಶ್ವಿನ್ ಕೌಟುಂಬಿಕ ಕಾರಣಗಳಿಂದ ಮನೆಗೆ ಮರಳಿದ್ದಾರೆ. ಅಶ್ವಿನ್ ಪಂದ್ಯದ ನಡುವೆ ತಂಡ ಬಿಟ್ಟರೆ ನಿಯಮ ಏನು ಹೇಳುತ್ತದೆ?

ನಿನ್ನೆಯಷ್ಟೇ 500 ನೇ ವಿಕೆಟ್ ಕಬಳಿಸಿದ ಬಳಿಕ ರವಿಚಂದ್ರನ್ ಅಶ್ವಿನ್ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ತಾಯಿಗೆ ಅನಾರೋಗ್ಯದ ಸುದ್ದಿ ತಿಳಿದು ತಕ್ಷಣವೇ ಅಶ್ವಿನ್ ಮನೆಗೆ ಮರಳಿದ್ದಾರೆ. ಅಶ್ವಿನ್ ಗೈರು ಟೀಂ ಇಂಡಿಯಾಕ್ಕೆ ಇಂದು ಕಾಡಲಿದೆ. ಆದರೆ ಒಬ್ಬ ಆಟಗಾರ ಪಂದ್ಯದ ನಡುವೆ ಹೊರನಡೆದರೆ ನಿಯಮ ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ.

ಅಶ್ವಿನ್ ಹೊರನಡೆದಿರುವುದರಿಂದ ಭಾರತ 10 ಆಟಗಾರರೊಂದಿಗೆ ಪಂದ್ಯವಾಡಬೇಕಾಗುತ್ತದೆ. ನಿಯಮಾನುಸಾರ 11 ಆಟಗಾರರ ಪೈಕಿ ಓರ್ವನಿಗೆ ಗಾಯವಾದರೆ ಅಥವಾ ಅನಾರೋಗ್ಯವಾದರೆ ಮಾತ್ರ ಬದಲಿ ಆಟಗಾರನನ್ನು ನೀಡಬಹುದಾಗಿದೆ. ಆದರೆ ಇದರ ಹೊರತಾಗಿ ಯಾವುದೇ ಕಾರಣಕ್ಕೂ ಬದಲಿ ಆಟಗಾರನನ್ನು ನೀಡಲಾಗುವುದಿಲ್ಲ. ಬದಲಿ ಆಟಗಾರ ನಾಯಕನಾಗಿ ಅಥವಾ ಬೌಲರ್ ಆಗಿ ಕಣಕ್ಕಿಳಿಯುವಂತಿಲ್ಲ. ಅಂಪಾಯರ್ ಒಪ್ಪಿದರೆ ವಿಕೆಟ್ ಕೀಪರ್ ಆಗಿ ಮಾತ್ರ ಕಣಕ್ಕಿಳಿಯಬಹುದು. ಇದೀಗ ಭಾರತಕ್ಕೆ ಈ ಟೆಸ್ಟ್ ಪಂದ್ಯದಲ್ಲಿ ಬದಲಿ ಆಟಗಾರನನ್ನು ನೀಡಬೇಕಾದರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ ಒಪ್ಪಿಗೆ ಬೇಕಾಗುತ್ತದೆ.

ಸದ್ಯಕ್ಕೆ ಅಶ್ವಿನ್ ಸ್ಥಾನಕ್ಕೆ ಬದಲಿ ಆಟಗಾರ ಬಂದರೂ ಆತ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡಲು ಸಾಧ‍್ಯವಿಲ್ಲ. ಕೇವಲ ಫೀಲ್ಡಿಂಗ್ ಮಾತ್ರ ಮಾಡಬಹುದಾಗಿದೆ. ಅದೂ ಬೆನ್ ಸ್ಟೋಕ್ಸ್ ಒಪ್ಪಿದರೆ ಮಾತ್ರ. ಒಂದು ವೇಳೆ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಅಥವಾ ಅಕ್ಸರ್ ಪಟೇಲ್ ಕಣಕ್ಕಿಳಿದರೆ ಅವರು ಬೆನ್ ಸ್ಟೋಕ್ಸ್ ಒಪ್ಪಿದರೆ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟ್ ಅಥವಾ ಬೌಲಿಂಗ್ ಮಾತ್ರ ಮಾಡಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

Virat Kohli: ನೀವೇ ಕರೆಸಿ ಜಾತ್ರೆ ಮಾಡಿ ಈಗ ವಿರಾಟ್ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ

Vijay Mallya: ನಾನೇನಾದ್ರೂ ಆರ್ ಸಿಬಿಯಲ್ಲಿ ಇದ್ದಿದ್ರೆ ಕೆಎಲ್ ರಾಹುಲ್..: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ

Arrest Kohli: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿ ಹ್ಯಾಶ್‌ಟ್ಯಾಗ್‌

ಮುಂದಿನ ಸುದ್ದಿ
Show comments