Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ: ವಿದರ್ಭಕ್ಕೆ ಗೆಲ್ಲಲು 301 ರನ್ ಗುರಿ ನೀಡಿದ ಕರ್ನಾಟಕ ತಂಡ

ರಣಜಿ ಟ್ರೋಫಿ: ವಿದರ್ಭಕ್ಕೆ ಗೆಲ್ಲಲು 301 ರನ್ ಗುರಿ ನೀಡಿದ ಕರ್ನಾಟಕ ತಂಡ
Vadodara , ಸೋಮವಾರ, 7 ನವೆಂಬರ್ 2016 (13:36 IST)
ವಡೋದರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ತಂಡಕ್ಕೆ ಗೆಲ್ಲಲು ಕರ್ನಾಟಕ 301 ರನ್ ಗಳ ಗುರಿ ನಿಗದಿಪಡಿಸಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕ 209 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ನಲ್ಲಿ ವಿದರ್ಭ 176 ಕ್ಕೆ ಆಲೌಟ್ ಆಗಿತ್ತು. ಕರ್ನಾಟಕ 267 ರನ್ ಗಳಿಸಿತ್ತು. ಇದರಿಂದಾಗಿ ರಾಜ್ಯ ತಂಡ 91 ರನ್ ಗಳ ಮುನ್ನಡೆ ಪಡೆದಿತ್ತು.

ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕದ ಪರ ನಾಯಕ ವಿನಯ್ ಕುಮಾರ್ ಅರ್ಧಶತಕ ಗಳಿಸಿ ಮಿಂಚಿದರು. ಆರ್. ಸಮರ್ಥ್ 47 ರನ್ ಗಳಿಸಿದ್ದರು. ಇದು ಸಂಪೂರ್ಣವಾಗಿ ಬೌಲರ್ ಗಳ ಪಂದ್ಯವಾಗಿದ್ದು ಎರಡೂ ತಂಡಗಳ ಬೌಲರ್ ಗಳೇ ಮೇಲುಗೈ ಸಾಧಿಸಿದ್ದಾರೆ.

ನಾಳೆ ಇನ್ನೂ ಒಂದು ದಿನ ಬಾಕಿಯಿದ್ದು, ಪಿಚ್ ಬೌಲರ್ ಗಳಿಗೆ ಸಹಕಾರಿಯಾಗಿರುವುದರಿಂದ ಕರ್ನಾಟಕ ಈ ಋತುವಿನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾ ಎದುರು ಗೆದ್ದ ದ.ಆಫ್ರಿಕಾ